Friday, September 18, 2026

BDA Apartments

ಜಯದೇವ ರೋಗಿಗಳ ಸಾವು ಕೇಸ್: ಇನ್ನೆರಡು ತಿಂಗಳಲ್ಲಿ ಸಿಬ್ಬಂದಿಗಳ ಕೊರತೆ ನಿವಾರ...
Home Front Page ಜಯದೇವ ರೋಗಿಗಳ ಸಾವು ಕೇಸ್: ಇನ್ನೆರಡು ತಿಂಗಳಲ್ಲಿ ಸಿಬ್ಬಂದಿಗಳ ಕೊರತೆ ನಿವಾರಣೆ- ಸಚಿವ ಡಾ ಶರಣ...

ಜಯದೇವ ರೋಗಿಗಳ ಸಾವು ಕೇಸ್: ಇನ್ನೆರಡು ತಿಂಗಳಲ್ಲಿ ಸಿಬ್ಬಂದಿಗಳ ಕೊರತೆ ನಿವಾರಣೆ- ಸಚಿವ ಡಾ ಶರಣ ಪ್ರಕಾಶ್ ಪಾಟೀಲ್

ಮೈಸೂರು,ಜೂನ್,17,2026 (www.justkannada.in):  ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ 11 ರೋಗಿಗಳ ಸಾವು ಪ್ರಕರಣ ಸಂಬಂಧ ಇನ್ನೆರಡು ತಿಂಗಳಲ್ಲಿ ಸಿಬ್ಬಂದಿಗಳ ಕೊರತೆ ನಿವಾರಣೆ ಮಾಡುತ್ತೇವೆ ಎಂದು ಸಚಿವ ಡಾ ಶರಣ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.

ಇಂದು ಮೈಸೂರಿನಲ್ಲಿ ಮಾತನಾಡಿದ ಸಚಿವ ಡಾ ಶರಣ ಪ್ರಕಾಶ್ ಪಾಟೀಲ್, ಕಳೆದ ಹತ್ತಾರು ವರ್ಷಗಳ ಸಾವಿನ ಪ್ರಮಾಣ ನೋಡಿದ್ರೆ 4 to 5% ಇದೆ. ಒಂದೇ ದಿನ 11 ಜನ ಸಾವಿನ ಬಗ್ಗೆ ಮಾಹಿತಿ ಕೇಳಿದ್ದೇನೆ. ಜಯದೇವ ಆಸ್ಪತ್ರೆ ರಾಜ್ಯಕ್ಕೆ ಮಾತ್ರವಲ್ಲ ದೇಶಕ್ಕೆ ಮಾದರಿಯಾಗಿದೆ. ಸಾವಿನ ಬಗ್ಗೆ ಲೋಪದೋಷ ಇದ್ದರೆ ವೈದ್ಯರ ಬಳಿ ಮಾಹಿತಿ ಕೇಳಿ. ನಾವು ಅದರ ಮಾಹಿತಿ ಕೊಡುತ್ತೇವೆ ಎಂದರು.ಜಯದೇವ ರೋಗಿಗಳ ಸಾವು ಕೇಸ್ BDA JK_Adv BDA Adv

ಜಯದೇವ ಆಸ್ಪತ್ರೆ ವಿರುದ್ಧ ತಪ್ಪು ಮಾಹಿತಿ ರವಾನೆಯಾದ್ರೆ ಖಾಸಗಿ ಆಸ್ಪತ್ರೆಗಳಿಗೆ ಲಾಭವಾಗುತ್ತದೆ. ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ಕೊಡೋದನ್ನ ನಾವು ಮಾಡಿದ್ದೇವೆ. ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಉಚಿತ ಚಿಕಿತ್ಸೆ ಕೊಡುತ್ತೇವೆ. ಸಾವಿನ ಬಗ್ಗೆ ನಿಖರ ಮಾಹಿತಿ ಕೇಳಿದ್ದೇನೆ. ವೈದ್ಯರು ಅವಲೋಕನ ಮಾಡಿ ಅಂತ ಹೇಳಿದ್ದೇನೆ. ಕಲ್ಬುರ್ಗಿ, ಮೈಸೂರು ಎಲ್ಲವನ್ನು ಬೆಂಗಳೂರಿನಿಂದ ಹ್ಯಾಂಡಲ್ ಮಾಡ್ತೇವೆ. ಹೀಗಾಗಿ ಕಲಬುರ್ಗಿ ಹಾಗೂ ಮೈಸೂರು ಜಯದೇವ ಆಸ್ಪತ್ರೆಗಳಿಗೆ ಸ್ವತಂತ್ರ ನಿರ್ಧಾರ ಕೈಗೊಳ್ಳಲು, ತೀರ್ಮಾನ ಮಾಡಲು ಅಧಿಕಾರ ಕೊಡಲು ತೀರ್ಮಾನ ಮಾಡಿದ್ದೇವೆ. ಕೆಲ ನಿರ್ಧಾರಗಳನ್ನ ಸ್ಥಳೀಯವಾಗಿಯೇ ಕೈಗೊಳ್ಳಬೇಕಿದೆ. ಇನ್ನೆರಡು ತಿಂಗಳಲ್ಲಿ ಸಿಬ್ಬಂದಿಗಳ ಕೊರತೆ ನಿವಾರಣೆಯಾಗುತ್ತದೆ ಎಂದರು.ಇನ್ನೆರಡು ತಿಂಗಳಲ್ಲಿ ಸಿಬ್ಬಂದಿಗಳ ಕೊರತೆ ನಿವಾರಣೆ jk02_new jk02 new

Key words: Jayadeva, patient, death case, Minister, Dr Sharan Prakash Patil