Friday, August 14, 2026

BDA Apartments

Home Front Page ಜನಾರ್ಧನ ರೆಡ್ಡಿ ಬಿಜೆಪಿಗೆ ಬಂದರೇ ಸ್ವಾಗತ-ಮಾಜಿ ಸಚಿವ ಶ್ರೀರಾಮುಲು.

ಜನಾರ್ಧನ ರೆಡ್ಡಿ ಬಿಜೆಪಿಗೆ ಬಂದರೇ ಸ್ವಾಗತ-ಮಾಜಿ ಸಚಿವ ಶ್ರೀರಾಮುಲು.

ಬಳ್ಳಾರಿ,ಜನವರಿ,13,2024(www.justkannada.in):  ಕಳೆದ ವಿಧಾನಸಭೆ ವೇಳೆ ಕೆಆರ್ ಪಿಸಿ ಪಕ್ಷ ಕಟ್ಟಿ ಒಂದು ಸ್ಥಾನ ಗೆದ್ದಿರುವ ಶಾಸಕ ಜನಾರ್ಧನರೆಡ್ಡಿ ಅವರನ್ನ ಮತ್ತೆ ಬಿಜೆಪಿಗೆ ಕರೆತರಲು ಕಸರತ್ತು ನಡೆಯುತ್ತಿದೆ ಎನ್ನಲಾಗುತ್ತಿದ್ದು ಈ ಕುರಿತು ಮಾತನಾಡಿರುವ ಮಾಜಿ ಸಚಿವ ಶ್ರೀರಾಮುಲು, ಜನಾರ್ಧನರೆಡ್ಡಿ ಬಿಜೆಪಿಗೆ ಬಂದರೇ ಸ್ವಾಗತ ಎಂದಿದ್ದಾರೆ.

ಇಂದು ಮಾತನಾಡಿದ ಮಾಜಿ ಸಚಿವ ಶ್ರೀರಾಮುಲು, ಜನಾರ್ಧನರೆಡ್ಡಿ ಬಿಜೆಪಿಗೆ ಬಂದರೆ ಸ್ವಾಗತ. ಅವರು ಬಿಜೆಪಿ ಬಂದರೆ ನನ್ನ ಅಭ್ಯಂತರವಿಲ್ಲ ನನ್ನ ಬೆಳೆಸಿದ್ದೇ ಜನಾರ್ಧನ ರೆಡ್ಡಿ. ಅಷ್ಟೇ ಅಲ್ಲ. ಅನ್ನ ಕೊಟ್ಟವರು ಕೂಡ ಅವರೇ ಎಂದು ಹೇಳಿದರು.

Key words: Janardhan Reddy- comes – BJP-welcome-former minister- Sriramulu.