20 ವರ್ಷಗಳ ವನವಾಸದಿಂದ ನನಗೆ ಮುಕ್ತಿ ಸಿಗುವ ವಿಶ್ವಾಸ ಇದೆ: ಬಿಜೆಪಿ ಅಭ್ಯರ್ಥಿ ಬಾಲರಾಜು

ಮೈಸೂರು,ಮಾರ್ಚ್,19,2024(www.justkannada.in):  ಇಪ್ಪತ್ತು ವರ್ಷಗಳ ರಾಜಕೀಯ ವನವಾಸದ ಬಳಿಕ ನನಗೊಂದು ಅವಕಾಶ ಸಿಕ್ಕಿದೆ. ಕ್ಷೇತ್ರದಲ್ಲಿ ಗೆದ್ದು ಬರುವ ಸಂಪೂರ್ಣ ವಿಶ್ವಾಸ ನನಗಿದೆ ಎಂದು ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಾಲರಾಜು ಹೇಳಿದರು.

ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಿಜೆಪಿ ಅಭ್ಯರ್ಥಿ ಬಾಲರಾಜು, ನನ್ನ ರಾಜಕೀಯ ಜೀವನದ 31 ವರ್ಷಗಳ ಅನುಭವದ ಕೇವಲ ಮೂರು ವರ್ಷಗಳು ಮಾತ್ರ ಅಧಿಕಾರ ಅನುಭವಿಸಿದ್ದು.  2004 ರಲ್ಲಿ ಪಕ್ಷೇತರ ಅಭ್ಯರ್ಥಿ ಸ್ಪರ್ಧೆ ಮಾಡಿ ಶಾಸಕನಾಗಿದ್ದೆ.  ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಹಲವು ಪಕ್ಷಕ್ಕೆ ಹೋಗಿ ಬಂದಾಯ್ತು. ನಾನು ಅಂದಿನಿಂದ ಇಲ್ಲಿವರೆಗೂ ಜನರ ಜೊತೆ ನಿರಂತರ ಸಂಪರ್ಕ ಇಟ್ಟುಕೊಂಡು ಬಂದಿದ್ದೇನೆ. 20 ವರ್ಷಗಳ ಬಳಿಕ ಒಂದು ಅವಕಾಶ ಸಿಕ್ಕಿದೆ. ಕ್ಷೇತ್ರದಲ್ಲಿ ಉತ್ತಮ ವಾತಾವರಣ ಇದೆ. ಹಾಲಿ ಶಾಸಕರಾದ ಶ್ರೀನಿವಾಸ್ ಪ್ರಸಾದ್ ಅವರು ರಾಜಕೀಯ ನಿವೃತ್ತಿ ಘೋಷಿಸಿದರೂ ಅವರು ಬಿಜೆಪಿಯಲ್ಲೇ ಇದ್ದು ನನಗೆ ಆಶೀರ್ವಾದ ಮಾಡುತ್ತೇನೆ ಎಂದು ಹೇಳಿದ್ದಾರೆ. ಅವರ ಆಶೀರ್ವಾದ ನನ್ನ ಮೇಲೆ ಇರುತ್ತೆ ಎಂಬ ವಿಶ್ವಾಸ ಇದೆ.

ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿಲ್ಲದಿದ್ದರೂ ಬಿಜೆಪಿಗೆ ತನ್ನದೇ ಆದ ಹಿಡಿತ ಮತ್ತು ಸಾಂಪ್ರದಾಯಿಕ ಮತಗಳಿ ಇವೆ. ಜೊತೆಗೆ ನನಗೆ ಧ್ರುವನಾರಾಯಣ್ ಬೆಂಬಲಿಗರು, ಶ್ರೀನಿವಾಸ್ ಪ್ರಸಾದ್ ಬೆಂಬಲಿಗರು ಎಲ್ಲರು ನನಗೆ ಬೆಂಬಲಿಸುತ್ತಾರೆ ಎಂಬ ವಿಶ್ವಾಸ ಇದೆ.  20 ವರ್ಷಗಳ ವನವಾಸದಿಂದ ನನಗೆ ಮುಕ್ತಿ ಸಿಗುವ ವಿಶ್ವಾಸ ಇದೆ. ಟಿಕೆಟ್ ಸಿಗಲು ಇಂತಹವರೇ ಸಹಕಾರ ಹೆಚ್ಚು ಅಂತ ನಾನು ಹೇಳಲಾರೆ ಪಕ್ಷ ನನ್ನನ್ನ‌ ಗುರುತಿಸಿ ಟಿಕೆಟ್ ಕೊಟ್ಟಿದೆ. ಕ್ಷೇತ್ರದಲ್ಲಿ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದು ಬಾಲರಾಜು ಹೇಳಿದರು.

Key words: I am -confident – Chamaraja nagar- BJP candidate- Balaraju-mysore