ಕಲಬುರಗಿ,ಸೆಪ್ಟಂಬರ್,16,2026 (www.justkannada.in): ಕೆಪಿಎಸ್ ಸಿ ಹಗರಣ ವಿಚಾರವಾಗಿ ಚರ್ಚಿಸಲು ನಾವು ರೆಡಿ ಇದ್ದೇವೆ ಬಿಜೆಪಿಯವರು ಚರ್ಚೆಗೆ ಬರಲಿ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಜನರ ಸಮಸ್ಯೆ ಬಗ್ಗೆ ಚರ್ಚಿಸಲು ಅಧಿವೇಶನ ನಡೆಸೋದು ಜವಾಬ್ದಾರಿ, ಹಾಗಾಗಿ 3 ದಿನ ವಿಶೇಷ ಅಧಿವೇಶನ ನಡೆಸುತ್ತಿದ್ದೇವೆ. ಕಳೆದ ಬಾರಿ ವಿಪಕ್ಷಗಳು ಅಧೀವೇಶನವನ್ನು ಹಾಳು ಮಾಡಿದವು ಕೆಪಿಎಸ್ ಸಿ ವಿಚಾರವಾಗಿಯೂ ಚರ್ಚೆ ಮಾಡಲು ರೆಡಿ ಇದ್ದೇವೆ ಬಿಜೆಪಿಯವರು ಚರ್ಚೆಗೆ ಬರಲಿ ಎಂದರು.
ಹೆಚ್ ಡಿಕೆ ಮೊದಲು ಪ್ರಿಯಾಂಕ್ ಖರ್ಗೆ ಭಾಗಿ ಎಂದು ಹೇಳಿದರು. ಅಮೇಲೆ ನೈತಿಕ ಹೊಣೆ ಹೊರಬೇಕು ಎನ್ನುತ್ತಿದ್ದಾರೆ. ಬಿಜೆಪಿಯವರು ಯಾಕೆ ಶಿವಶಂಕರಪ್ಪ ಸಾಹುಕಾರ್ ಹೆಸರು ಹೇಳುತ್ತಿಲ್ಲ. ಅದರ ಬಗ್ಗೆ ಯಾಕೆ ಬಿಜೆಪಿಯವರು ಚರ್ಚೆ ಮಾಡಲ್ಲ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.
Key words: KPSC issue, Ready, discuss,, Home Minister, Priyank Kharge Challenge to BJP







