ಬಿಜೆಪಿ ಬದಲಿಗೆ ‘ಬೇರೆ ಪಕ್ಷದ ಚಿಹ್ನೆ’ಗೆ ಮತ ಚಲಾಯಿಸಿದ ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ !

himanta-biswa-sarma, voted-for-other-party-symbol, instead-of-bjp, for-the-first time

 

ಅಸ್ಸಾಂ, ಮೇ, 07, 2024: (www.justkannada.in news )  ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ರಾಜ್ಯದಲ್ಲಿ ಇಂದು ನಡೆದ  ಚುನಾವಣೆಯಲ್ಲಿ ಮತ ಚಲಾಯಿಸಿದ ನಂತರ  ಅಚ್ಚರಿಯ ಹೇಳಿಕೆಯೊಂದನ್ನು ಬಹಿರಂಗಪಡಿಸಿದರು.

ತಮ್ಮ ಎಂದಿನ ಆಯ್ಕೆಯಿಂದ ಹೊರಗುಳಿದ ಶರ್ಮಾ, ಭಾರತೀಯ ಜನತಾ ಪಕ್ಷದ ‘ಕಮಲ’ ಚಿಹ್ನೆಗೆ ಮತ ಚಲಾಯಿಸದೆ,  ತಮ್ಮ ಸಾಮಾನ್ಯ ನಿಷ್ಠೆಗಿಂತ ವಿಭಿನ್ನವಾದ ಚಿಹ್ನೆ ಆಯ್ಕೆ ಮಾಡಿಕೊಂಡಿರುವ ಬಗ್ಗೆ ಮಾಹಿತಿ ಬಹಿರಂಗಪಡಿಸಿದರು.

ಮತದಾನದ ಬಳಿಕ ಮತಗಟ್ಟೆಯ ಹೊರಗೆ ಮಾಧ್ಯಮದ ಜತೆ ಮಾತನಾಡಿದ ಶರ್ಮಾ, “ನಾನು ಯಾವಾಗಲೂ ಭಾರತೀಯ ಜನತಾ ಪಕ್ಷದ ಚಿಹ್ನೆ ‘ಕಮಲ’ಕ್ಕೆ ಮತ ಹಾಕುತ್ತೇನೆ, ಆದರೆ ಈ ಬಾರಿ ನಾನು ಇನ್ನೊಂದು ಚಿಹ್ನೆಗೆ ಮತ ಹಾಕಬೇಕಾಗಿತ್ತು ಎಂದರು. ಅವರ ಈ ಹೇಳಿಕೆಯು ರಾಜಕೀಯ ವೀಕ್ಷಕರು ಮತ್ತು ಸಾರ್ವಜನಿಕರಲ್ಲಿ ತಕ್ಷಣದ ಆಸಕ್ತಿ ಮತ್ತು ಊಹಾಪೋಹಗಳನ್ನು ಹುಟ್ಟುಹಾಕಿದೆ.

“ಇಂದು ಅಸ್ಸಾಂ ಚುನಾವಣೆಯ ಕೊನೆಯ ದಿನವಾಗಿದೆ. ನಾವು ಶಾಂತಿಯುತವಾಗಿ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಿದ್ದೇವೆ. ಉತ್ತಮ ಮತದಾನವಾಗಿದೆ. ಮೊದಲ ಎರಡು ಹಂತಗಳಲ್ಲಿ ಬಹುತೇಕ ಶೇಕಡಾ 80 ರಷ್ಟು ಮತದಾನ ದಾಖಲಾಗಿದೆ. ಇಂದು ಕೂಡ ಶೇಕಡಾ 80 ರಷ್ಟು ಮತದಾನವಾಗುವುದು ಖಚಿತ ಎಂದು ಶರ್ಮಾ  ಹೇಳಿದರು.

 ಅಸ್ಸಾಂನ ಆಚೆಗೆ ನೋಡಿದರೆ, ಈಶಾನ್ಯ ಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಅದರ ಮೈತ್ರಿ ಪಾಲುದಾರರ ಚುನಾವಣಾ ನಿರೀಕ್ಷೆಗಳ ಬಗ್ಗೆ ಶರ್ಮಾ ವಿಶ್ವಾಸ ವ್ಯಕ್ತಪಡಿಸಿದರು. “ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿ ಮತ್ತು ಅದರ ಮೈತ್ರಿಗೆ ಉತ್ತಮ ಫಲಿತಾಂಶ ಲಭಿಸಲಿದೆ ” ಎಂದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಈ ಪ್ರದೇಶದಲ್ಲಿ ಕೈಗೊಂಡ ಅಭಿವೃದ್ಧಿ ಉಪಕ್ರಮಗಳು ನಿರೀಕ್ಷಿತ ಯಶಸ್ಸಿಗೆ ಕಾರಣವಾಗಿವೆ ಎಂದರು.

ಕೃಪೆ : ಇಂಡಿಯಾ ಟುಡೆ.

key words:  himanta-biswa-sarma, voted-for-other-party-symbol, instead-of-bjp, for-the-first-time