ಮೈಸೂರು,ಆಗಸ್ಟ್,17,2026 (www.justkannada.in): ಕಬಿನಿ ಉಳಿವಿಗಾಗಿ ಶ್ರಮಿಸಿ, ಲಕ್ಷ್ಮಣತೀರ್ಥಕ್ಕೆ ತೋರಿದ ಕಾಳಜಿ ಕಬಿನಿಗೂ ತೋರಲಿ ಎಂದು ಹೆಚ್.ಡಿ.ಕೋಟೆ ಶಾಸಕ ಅನಿಲ್ ಚಿಕ್ಕಮಾದು ಅವರಿಗೆ ಸೇವ್ ಕಬಿನಿ ತಂಡ ಆಗ್ರಹಿಸಿದೆ.
ಮೈಸೂರಿನಲ್ಲಿ ಸೇವ್ ಕಬಿನಿ ಟೀಂ ಸುದ್ದಿಗೋಷ್ಠಿ ನಡೆಸಿತು. ಸಿಎಂ, ಗೃಹಸಚಿವರು, ಎಂಎಲ್ಎ ಅವರ ಮಕ್ಕಳು ಕುಡಿಯುತ್ತಿರುವುದು ಇದೇ ಕಬಿನಿ ನೀರು. ಬೆಂಗಳೂರು, ಮೈಸೂರು ಸೇರಿದಂತೆ ಎರಡು ಕೋಟಿ ಜನರು ಕುಡಿಯವು ನೀರಲ್ಲ ವಿಷ ಕುಡಿಯುತ್ತಿದ್ದಾರೆ. ಹೀಗಾಗಿ ಶಾಸಕ ಅನಿಲ್ ಚಿಕ್ಕಮಾದು ಅವರು ಸದನದಲ್ಲಿ ಈ ವಿಚಾರದ ಬಗ್ಗೆ ಚರ್ಚೆ ಮಾಡಬೇಕು ಲಕ್ಷ್ಮಣತೀರ್ಥಕ್ಕೆ ಹಣ ಬಿಡುಗಡೆ ಮಾಡಿಸಿದಂತೆ ಕಬಿನಿ ಉಳಿವಿಗೂ ಹಣ ಬಿಡುಗಡೆ ಮಾಡಿಸಿ. ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಿ.ಇಲ್ಲವಾದರೆ ಎಸ್ಪಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ತಪ್ಪಿತಸ್ಥರ ವಿರುದ್ದ ಕೇವಲ ಎನ್ ಸಿಆರ್ ದಾಖಲಿಸಿದರೆ ಸಾಲದು ಎಫ್ ಐ ಆರ್ ದಾಖಲಿಸಿ ಎಂದು ಸೇವ್ ಕಬಿನಿ ಟೀಂ ಆಗ್ರಹಿಸಿದೆ. ವಕೀಲ ವಿ.ರವಿಕುಮಾರ್, ಮಂಜುಕಿರಣ್, ಮಧುಕೇಶ್ ಸೇರಿ ಹಲವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
Key words: Lakshmana Tirtha, kabini, – MLA, Kabini Save Team







