ಹಾಸನ ಮಾರ್ಗವಾಗಿ ವಿಜಯಪುರದಿಂದ ಮಂಗಳೂರಿಗೆ  ನೂತನ ರೈಲು ಆರಂಭ

ಹಾಸನ/ವಿಜಯಪುರ, ನ,10,2019(www.justkannada.in): ನೈಋತ್ಯ ರೈಲ್ವೆಯು ವಿಜಯಪುರದಿಂದ ಮಂಗಳೂರು ಜಂಕ್ಷನ್‍ಗೆ ಹಾಸನ ಮಾರ್ಗವಾಗಿ ನೂತನ ರೈಲನ್ನು ಆರಂಭಿಸಿದೆ.   ಗಾಡಿಸಂಖ್ಯೆ 07327/ 07328 ತತ್ಕಾಲ್ ರೈಲು ಪ್ರತಿದಿನ ವಿಜಯಪುರದಿಂದ ಮಂಗಳೂರಿಗೆ ಸಂಚರಿಸಲಿದ್ದು, ಈ ಮೂಲಕ ಉತ್ತರ ಕರ್ನಾಟಕದಿಂದ ಕರಾವಳಿಗೆ ರೈಲು ಸಂಪರ್ಕ ಸಾಧ್ಯವಾಗಿದೆ.

ಈ ರೈಲು ಪ್ರತಿದಿನ ಸಂಜೆ 6.30ಕ್ಕೆ ವಿಜಯಪುರದಿಂದ ಹೊರಟು ಬಸವನಬಾಗೇವಾಡಿ, ಆಲಮಟ್ಟಿ, ಬಾಗಲಕೋಟೆ, ಬಾದಾಮಿ, ಹೊಳೆ ಆಲೂರು, ಗದಗ, ಹುಬ್ಬಳ್ಳಿ, ಹಾವೇರಿ, ರಾಣೆಬೆನ್ನೂರು, ಹರಿಹರ, ದಾವಣಗೆರೆ, ಕಡೂರು, ಅರಸಿಕೆರೆಗೆ ಬೆಳಗಿನ ಜಾವ 5.15ಕ್ಕೆ ಬರಲಿದೆ. ಅರಸೀಕೆರೆಯಿಂದ 5.25ಕ್ಕೆ ಹೊರಟು 6.13ಕ್ಕೆ ಹಾಸನಕ್ಕೆ ಬರಲಿದೆ. 6.15ಕ್ಕೆ ಹಾಸನದಿಂದ ಹೊರಟು ಸಕಲೇಸಪುರಕ್ಕೆ  7.10ಕ್ಕೆ ಆಗಮಿಸಿ  7.30ಕ್ಕೆ ಹೊರಡಲಿದೆ.

ಮರುದಿನ ಮಧ್ಯಾಹ್ನ 12.40ಕ್ಕೆ ಮಂಗಳೂರು ತಲುಪಲಿದೆ. ಸಂಜೆ 4.30ಕ್ಕೆ ಮಂಗಳೂರು ಬಿಡುವ ರೈಲು ಸಕಲೇಶಪುರಕ್ಕೆ ರಾತ್ರಿ 9ಕ್ಕೆ ಆಗಮಿಸಿ ರಾತ್ರಿ 9.10ಕ್ಕೆ ಬಿಡಲಿದೆ. ಹಾಸನಕ್ಕೆ ರಾತ್ರಿ 10ಕ್ಕೆ ಆಗಮಿಸಿ ರಾತ್ರಿ 10.2ಕ್ಕೆ ಬಿಡಲಿದೆ. ಅರಸೀಕೆರೆಗೆ ರಾತ್ರಿ 10.50ಕ್ಕೆ ಆಗಮಿಸಿ 10.55ಕ್ಕೆ ಬಿಡಲಿದೆ. ವಿಜಯಪುರಕ್ಕೆ ಮರುದಿನ  11ಕ್ಕೆ ತಲುಪಲಿದೆ.

Key words: hassan – vijayapura -mangaluru -start – new train