Sunday, August 9, 2026

BDA Apartments

Home Front Page  ಹೆಚ್.ವಿಶ್ವನಾಥ್ ಗೆ ಎಂಎಲ್ ಸಿ ಸ್ಥಾನ ನೀಡುವಂತೆ ಮಾಜಿ ಸಿಎಂ ಸಿದ್ಧರಾಮಯ್ಯ ಅವರ ಆಪ್ತ ಬ್ಯಾಟಿಂಗ್: ...

 ಹೆಚ್.ವಿಶ್ವನಾಥ್ ಗೆ ಎಂಎಲ್ ಸಿ ಸ್ಥಾನ ನೀಡುವಂತೆ ಮಾಜಿ ಸಿಎಂ ಸಿದ್ಧರಾಮಯ್ಯ ಅವರ ಆಪ್ತ ಬ್ಯಾಟಿಂಗ್:  ಸಿಎಂಗೆ ಮನವಿ ಸಲ್ಲಿಕೆ…

ಬೆಂಗಳೂರು,ಜು,6,2020(www.justkannada.in): ಮಾಜಿ ಸಚಿವ ಹೆಚ್. ವಿಶ್ವನಾಥ್ ಗೆ  ಪರಿಷತ್ ಸ್ಥಾನ ಕೈ ತಪ್ಪಿದ ಬೆನ್ನಲ್ಲೆ ಅವರನ್ನ ಎಂಎಲ್ ಸಿ ಮಾಡುವಂತೆ ಹಲವು ಮುಖಂಡರು ಆಗ್ರಹಿಸುತ್ತಿದ್ದಾರೆ. ಈ ನಡುವೆ ಎಂಎಲ್ ಸಿ ಸ್ಥಾನಕ್ಕೆ ಆಯ್ಕೆ ಸಂಬಂಧಿಸಿದಂತೆ  ಹೆಚ್ ವಿಶ್ವನಾಥ್ ಪರ ಮಾಜಿ ಸಿಎಂ ಸಿದ್ಧರಾಮಯ್ಯ ಅವರ ಆಪ್ತನೇ ಆಗಿರುವ ಕಾಂಗ್ರೆಸ್ ಮುಖಂಡ ಹೆಚ್.ಎಂ ರೇವಣ್ಣ  ಬ್ಯಾಟ್ ಬೀಸಿದ್ದಾರೆ.

ಸಾಹಿತ್ಯ ಕ್ಷೇತ್ರದಲ್ಲಿ  ಮಾಜಿ ಸಚಿವ ಎಚ್ ವಿಶ್ವನಾಥ್ ಗೆ  ಪರಿಷತ್ ಸ್ಥಾನ  ನೀಡುವಂತೆ ಹೆಚ್.ಎಂ ರೇವಣ್ಣ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನ ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.h-vishwanath-mlc-position-siddaramauiah-closer-h-m-revanna

ಕಾಂಗ್ರೆಸ್ ಮುಖಂಡ ರೇವಣ್ಣ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಅಪ್ತ. ಶೆಪರ್ಡ್ ಇಂಡಿಯಾ ಇಂಟರ್ನಾಷನಲ್ ಸಂಘಟನೆಯ ಸಂಚಾಲಕರಾಗಿದ್ದಾರೆ.  ಹೆಚ್.ವಿಶ್ವನಾಥ್ ಗೆ ಎಂಎಲ್ ಸಿ ಸ್ಥಾನ ನೀಡುವಂತೆ ಸಿಎಂಗೆ ಪತ್ರ ಬರೆದಿರುವ ಹೆಚ್.ಎಂ ರೇವಣ್ಣ,  ಹೆಚ್.ವಿಶ್ವನಾಥ್ ಕುರುಬ ಸಮುದಾಯವನ್ನು‌ ಅಂತರಾಷ್ಟ್ರೀಯ ಮಟ್ಟದಲ್ಲಿ ಸಂಘಟನೆ ಮಾಡಿದ್ದಾರೆ.ಅವರು ಒಬ್ಬ ಮೇಧಾವಿ ಸೇವೆ ಸಮಾಜಕ್ಕೆ ಆಗತ್ಯವಿದೆ. ಹೆಚ್.ವಿಶ್ವನಾಥ್ ಹಿಂದುಳಿದ ವರ್ಗದ ಪ್ರಮುಖ ಮತ್ತು ಪ್ರಭಾವ ಶಾಲಿ ನಾಯಕರು. ಹಿಂದುಳಿದ ವರ್ಗಗಳ ಸಂಘಟನೆ ಏಕತೆಗೆ ತಮ್ಮದೆ ಆದ ಕೊಡುಗೆ ನೀಡಿದ್ದಾರೆ.h-vishwanath-mlc-position-siddaramauiah-closer-h-m-revanna

ಹೆಚ್.ವಿಶ್ವನಾಥ್ ಬುದ್ಧಿಜೀವಿಗಳು. ಹೆಸರಾಂತ ಸಾಹಿತಿಗಳು, ಹಳ್ಳಿಹಕ್ಕಿಯ ಹಾಡು, ಮತಸಂತೆ, ಸಿರಿಭೂಮಿ, ಮಲ್ಲಿಗೆ ಮಾತುಗಳು ಸೇರಿ ಹಲವು ಕೃತಿಗಳನ್ನ ರಚಿಸಿದ್ದಾರೆ.  ಹೀಗಾಗಿ  ಸಾಹಿತ್ಯ ಕ್ಷೇತ್ರದಲ್ಲಿ ಎಚ್ ವಿ‌ಶ್ವನಾಥ್  ಗೆ ಪರಿಷತ್ ಸ್ಥಾನ ‌ನೀಡುವಂತೆ ಹೆಚ್.ಎಂ ರೇವಣ್ಣ ಮನವಿ ಮಾಡಿ, ಮನವಿ ಪತ್ರದಲ್ಲಿ ‌ವಿಶ್ವನಾಥ್ ರನ್ನು ‌ಹಾಡಿ‌ಹೊಗಳಿದ್ದಾರೆ.

Key words: H.Vishwanath-MLC- Position-siddaramauiah-closer-H.M Revanna