ಕೋಲಾರದಿಂದ ಸಿದ್ಧರಾಮಯ್ಯಗಿಲ್ಲ ಟಿಕೆಟ್:  ಕಾಂಗ್ರೆಸ್ ಅಭ್ಯರ್ಥಿಗಳ 3ನೇ ಪಟ್ಟಿ ರಿಲೀಸ್.

ಬೆಂಗಳೂರು:,ಏಪ್ರಿಲ್,15,2023(www.justkannada.in): ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ಈಗಾಗಲೇ ಅಭ್ಯರ್ಥಿಗಳ ಎರಡು ಪಟ್ಟಿ ಬಿಡುಗಡೆ ಮಾಡಿದ್ದ ಕಾಂಗ್ರೆಸ್ ಇಂದು 3ನೇ ಪಟ್ಟಿ ಬಿಡುಗಡೆ ಮಾಡಿದೆ.

ಕಾಂಗ್ರೆಸ್​ 43 ಕ್ಷೇತ್ರಗಳನ್ನು ಬಾಕಿ ಉಳಿಸಿಕೊಂಡಿತ್ತು. ಇದೀಗ ಆ 43 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಸಿದ್ದರಾಮಯ್ಯ ಅವರಿಗೆ ಕೋಲಾರ ಟಿಕೆಟ್​ ನೀಡಿಲ್ಲ. ಬದಲಿಗೆ ಕೋಲಾರ ಟಿಕೆಟ್​ ಕೊತ್ತೂರು ಮಂಜುನಾಥ್ ಅವರಿಗೆ ನೀಡಲಾಗಿದೆ. ಇದರಿಂದ ಸಿದ್ದರಾಮಯ್ಯ ವರುಣಾದಿಂದ ಮಾತ್ರ ಸ್ಪರ್ಧೆ ಫಿಕ್ಸ್  ಆಗಿದೆ.

ಕಾಂಗ್ರೆಸ್ ಅಭ್ಯರ್ಥಿಗಳ ಮೂರನೇ ಪಟ್ಟಿ ಹೀಗಿದೆ.

ಕೋಲಾರ – ಕೊತ್ತೂರು ಮಂಜುನಾಥ್

ದಾಸರಹಳ್ಳಿ- ಧನಂಜಯ

ಚಿಕ್ಕಪೇಟೆ – ಆರ್ ವಿ ದೇವರಾಜ್

ಅಥಣಿ- ಲಕ್ಷಣ್ ಸವದಿ

ಕೃಷ್ಣರಾಜ – ಎಂ.ಕೆ‌ ಸೋಮಶೇಕರ್

ಶಿಖಾರಿಪುರ- ಗೋಣಿ ಮಾಲ್ತೇಶ್

ತೇರದಾಳ – ಸಿದ್ದು ಕೊಣ್ಣೂರರಚ

ತರಿಕೆರೆ- ಶ್ರೀನಿವಾಸ್

ಚಿಕ್ಕಬಳ್ಳಾಪುರ- ಪ್ರದೀಪ್ ಈಶ್ವರ್

ಅರಸಿಕೆರೆ- ಶಿವಲಿಂಗೇಗೌಡ

ಬೊಮ್ಮನಹಳ್ಳಿ – ಉಮಾಪತಿ ಗೌಡ

ಬೆಂಗಳೂರು ದಕ್ಷಿಣ- ಆರ್ ಕೆ ರಮೇಶ

ನಯನ- ಮೋಟಮ್ಮ ಮೂಡಿಗೆರೆ

ಮದ್ದೂರು- ಉದಯ್ ಗೌಡ’

ಶಿವಮೊಗ್ಗ – ಯೋಗೇಶ್

ನವಲಗುಂದ- ಕೋನರೆಡ್ಡಿ

ಕುಂದಗೋಳ- ಕುಸುಮಾ ಶಿವಳ್ಳಿ

ಕಲಬುರಗಿ ಗ್ರಾಮೀಣ- ರೇವುನಾಯಕ್ ಬೆಳಮಗಿ

ಅರಭಾವಿ ಕ್ಷೇತ್ರ-ಅರವಿಂದ ದಳವಾಯಿ

ರಾಯಬಾಗ ಕ್ಷೇತ್ರ-ಮಹಾವೀರ ಮೋಹಿತ್​

ಬೆಳಗಾವಿ ಉತ್ತರ ಕ್ಷೇತ್ರ-ಆಸೀಫ್ ಸೇಠ್​

ಬೆಳಗಾವಿ ದಕ್ಷಿಣ ಕ್ಷೇತ್ರ- ಪ್ರಭಾವತಿ ಮಾಸ್ತಿ ಮರಡಿ.

 

Key words: No Siddaramaiah -ticket -Kolar: 3rd list – Congress – released.