ಕಂಪನಿಯಲ್ಲಿ ಕಳ್ಳತನ ಎಫೆಕ್ಟ್ : ಉದ್ಯೋಗಿ ಆತ್ಮಹತ್ಯೆಗೆ ಶರಣು….

kannada t-shirts

ಮೈಸೂರು,ಅ,29,2019(www.justkannada.in): ಖಾಸಗಿ ಕಂಪನಿಯೊಂದರಲ್ಲಿ  ಕಳ್ಳತನ ನಡೆದ ಹಿನ್ನೆಲೆ ಕಂಪನಿಯ ಉದ್ಯೋಗಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ಹೊರವಲಯದಲ್ಲಿರುವ ಹೂಟಗಳ್ಳಿಯ ಸ್ಪೆಕ್ಟ್ರಾ ಪೈಪ್ಸ್ ಕಂಪನಿಯ ಉದ್ಯೋಗಿ ಹರೀಶ್ ಕುಮಾರ್ (42) ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡವರು. ಕುವೆಂಪುನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮಧುವನದಲ್ಲಿ ಈ ಘಟನೆ ನಡೆದಿದೆ.

ಹರೀಶ್ ಕುಮಾರ್  ಕಂಪನಿಯ ಸೂಪರ್ ವೈಸರ್ ಆಗಿದ್ದರು. ಕಳೆದ ಕೆಲವು ದಿನಗಳ ಹಿಂದೆ ಫ್ಯಾಕ್ಟರಿಯಲ್ಲಿ ಕಳ್ಳತನ ನಡೆದಿತ್ತು.. ಲಕ್ಷಾಂತರ ರೂಪಾಯಿ ಮೌಲ್ಯದ ಪದಾರ್ಥಗಳ ಕಳ್ಳತನವಾಗಿತ್ತು. ಹರೀಶ್ ಕುಮಾರ್ ರವರೇ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಈ ನಡುವೆ ಪೊಲೀಸರ ವಿಚಾರಣೆಗೆ ಹೆದರಿ ಹರೀಶ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಕುಟುಂಬಸ್ಥರು  ಆರೋಪಿಸಿದ್ದಾರೆ. ಹಾಗೆಯೇ ಕಂಪನಿಯಲ್ಲಿ ಕಿರುಕುಳ ಕೊಡಲಾಗುತ್ತಿತ್ತೆಂದು ಹರೀಶ್ ಕುಮಾರ್ ಡೈರಿಯಲ್ಲಿ ಉಲ್ಲೇಖಿಸಿರುವುದಾಗಿ ಕುಟುಂಬದವರು ಹೇಳಿಕೆ ನೀಡಿದ್ದಾರೆ. . ಕಳ್ಳತನ ಪ್ರಕರಣದ ವಿಚಾರಣೆಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಹರೀಶ್ ಕುಮಾರ್ ಡೈರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು ಕಳ್ಳತನಕ್ಕೂ ಹರೀಶ್ ಕುಮಾರ್ ಗೂ ನಂಟು ಇದೆಯೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ಕಂಪನಿ ಮಾಲೀಕ ಅನಿಲ್ ಮೆಹ್ರಾ ಭೇಟಿ ನೀಡಿದ್ದು, ಮಾಲೀಕನ ವಿರುದ್ದವೇ ಕುಟುಂಬಸ್ಥರು ತಿರುಗಿಬಿದ್ದರು. ಈ ವೇಳೆ ಹರೀಶ್ ಕುಮಾರ್ ಸನ್ನಡತೆಯವರು ಎಂದು ಮಾಲೀಕ ಅನಿಲ್ ಮೆಹ್ರಾ ಸಮರ್ಥಿಸಿಕೊಂಡರು. ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.

Key words: mysore-Theft Effect – Company- Surrender – employee -suicide

website developers in mysore