Saturday, September 12, 2026

BDA Apartments

ಸಾಲಬಾಧೆ: ಡೆತ್ ನೋಟ್ ಬರೆದಿಟ್ಟು ಕೂಲಿ ಕಾರ್ಮಿಕ ಆತ್ಮಹತ್ಯೆ BDA JK_Adv BDA Adv
Home Crime ಸಾಲಬಾಧೆ: ಡೆತ್ ನೋಟ್ ಬರೆದಿಟ್ಟು ಕೂಲಿ ಕಾರ್ಮಿಕ ಆತ್ಮಹತ್ಯೆ.

ಸಾಲಬಾಧೆ: ಡೆತ್ ನೋಟ್ ಬರೆದಿಟ್ಟು ಕೂಲಿ ಕಾರ್ಮಿಕ ಆತ್ಮಹತ್ಯೆ.

ಮೈಸೂರು,ಮೇ,24,2022(www.justkannada.in):  ಸಾಲಬಾಧೆ ತಾಳಲಾರದೆ ಡೆತ್ ನೋಟ್ ಬರೆದಿಟ್ಟು ಕೂಲಿಕಾರ್ಮಿಕ ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ಸರಸ್ವತಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಟೆಲಿಕಾಂ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ಪ್ರಶಾಂತ್ ನಗರ ಬಡಾವಣೆಯ ಮಹೇಶ್(30) ಮೃತ ಕಾರ್ಮಿಕ. ನನ್ನ ಸಾವಿಗೆ ನಾನೇ ಕಾರಣ ಹೊರತು ಯಾರೂ ಕಾರಣವಲ್ಲವೆಂದು ಡೆತ್ ನೋಟ್ ಬರೆದಿಟ್ಟು ಕೂಲಿ ಕಾರ್ಮಿಕ ಮಹೇಶ್ ಆತ್ಮಹತ್ಯೆಗೆ ಶರಣಾಗಿದ್ದು, ಹೆಚ್ಚಿನ ಸಾಲ ಮಾಡಿಕೊಂಡಿದ್ದ ಎಂದು ಹೇಳಲಾಗಿದೆ.

ಸಾಲ ತೀರಿಸಲು ಸಾಧ್ಯವಾಗದ ಹಿನ್ನಲೆ ಡೆತ್ ನೋಟ್ ಬರೆದು ಟೆಲಿಕಾಂ ಬಡಾವಣೆಯ ಪಾರ್ಕ್ ಒಂದರಲ್ಲಿ ನೇಣಿಗೆ ಶರಣಾಗಿದ್ದಾನೆ. ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: mysore-suicide -Death Note-labor