ಸಾರ್ವಜನಿಕರ ಕುಂದು ಕೊರತೆ ಆಲಿಸಲು ಕಚೇರಿ ತೆರೆದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ…

ಮೈಸೂರು,ಸೆ,13,2019(www.justkannada.in):  ಸಾರ್ವಜನಿಕರಕುಂದು ಕೊರತೆಗಳನ್ನ ಆಲಿಸಲು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ ಸೋಮಣ್ಣ ಕಚೇರಿ ತೆರೆದಿದ್ದಾರೆ.

ನಗರದ ಮೂಡ ಕಚೇರಿಯ ಒಂದನೇ ಮಹಡಿಯಲ್ಲಿ ಕಚೇರಿ ತೆರಯಲಾಗಿದ್ದು, ಇಂದು  ಟೇಪ್ ಕತ್ತರಿಸುವ ಮೂಲಕ ಸಚಿವ ವಿ.ಸೋಮಣ್ಣ ಕಚೇರಿಯನ್ನ ಉದ್ಘಾಟಿಸಿದರು.  ಇದೇ ವೇಳೆ ತಾಯಿ ಚಾಮುಂಡೇಶ್ವರಿ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಕೆ ಮಾಡಿದರು. ಸಚಿವರಿಗೆ ಶಾಸಕರುಗಳಾದ ಎಲ್ ನಾಗೇಂದ್ರ,  ನಿರಂಜನ್ ಕುಮಾರ್ ಸಾಥ್ ನೀಡಿದರು.

ಈ ಕಚೇರಿಯಲ್ಲಿ ಸಾರ್ವಜನಿಕರ ಕುಂದುಕೊರತೆ ಆಲಿಸಲು ಹಾಗೂ ಅಹವಾಲು ಸ್ವೀಕರಿಸಲಿದ್ದಾರೆ.

Key words: Mysore –minister-V, Somanna- Office – Public- problem-Hearing