ದೆಹಲಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮೈಸೂರು ಮೂಲದ ಯೋಧ ಹೃದಯಾಘಾತದಿಂದ ಸಾವು..

ಮೈಸೂರು,ಜನವರಿ,21,2021(www.justkannada.in): ದೆಹಲಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮೈಸೂರು ಮೂಲದ ಯೋಧ ನಿಂಗಯ್ಯ (40) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.jk-logo-justkannada-mysore

ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಕೆ ಬಿ ಕಾಲೋನಿ ನಿವಾಸಿಯಾಗಿರುವ ನಿಂಗಯ್ಯ(40), ದೆಹಲಿಯಲ್ಲಿ ಸಿಆರ್‌ಪಿ‌ಎಫ್ ಕರ್ತವ್ಯ ನಿರ್ವಹಿಸುತ್ತಿದ್ದರು. ನಿಂಗಯ್ಯ ಅವರು ಹಾಲಿ ದೆಹಲಿ ರೈತರ ಪ್ರತಿಭಟನೆಯ ಭದ್ರತೆಯಲ್ಲಿದ್ದರು. ಈ ನಡುವೆ ಹೃದಯಾಘಾತದಿಂದ ಯೋಧ ನಿಂಗಯ್ಯ ಸಾವನ್ನಪ್ಪಿದ್ದು ಸಕಲ ಸರ್ಕಾರಿ ಗೌರವದೊಂದಿಗೆ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ಅಂತ್ಯಕ್ರಿಯೆಗೂ ಮುನ್ನ ಹುಣಸೂರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಗುತ್ತದೆ.Mysore-district- soldier-death-heart attack

Key words: Mysore-district- soldier-death-heart attack