ಸರಳ ದಸರಾ ಹೆಸರಿನಲ್ಲಿ ಕೋಟಿ ಕೋಟಿ ಲೂಟಿ : ಸರ್ಕಾರದ ವಿರುದ್ಧ ಇತಿಹಾಸ ತಜ್ಞ ಪ್ರೊ.ನಂಜರಾಜೇ ಅರಸ್  ಆಕ್ರೋಶ…

ಮೈಸೂರು,ಅಕ್ಟೋಬರ್,8,2020(www.justkannada.in):  ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಸರಳ ಮತ್ತು ಸಾಂಪ್ರದಾಯಿಕವಾಗಿ ಆಚರಿಸುವುದಾಗಿ ಹೇಳುತ್ತಿರುವ ರಾಜ್ಯ ಸರ್ಕಾರ ಕೋಟಿ ಕೋಟಿ ರೂ ಖರ್ಚು ಮಾಡಲು ಮುಂದಾಗಿದೆ. ಸರಳ ದಸರಾ ಹೆಸರಿನಲ್ಲಿ ಕೋಟಿ ಕೋಟಿ ಲೂಟಿ ಮಾಡಲು ಹೊರಟಿದ್ದಾರೆ ಎಂದು ಇತಿಹಾಸ ತಜ್ಞ ಪ್ರೊ.ನಂಜರಾಜೇ ಅರಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.jk-logo-justkannada-logo

ಈ ಕುರಿತು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿರುವ ಇತಿಹಾಸ ತಜ್ಞ ಪ್ರೊ.ನಂಜರಾಜೇ ಅರಸ್, ಸರಳ ದಸರಾ ಹೆಸರಿನಲ್ಲಿ ಕೋಟಿಕೋಟಿ ಲೂಟಿ ಮಾಡಲು ಹೊರಟಿದ್ದಾರೆ. ಸರಳ ದಸರಾ ಎಂದರೆ ಇವರ ದೃಷ್ಟಿಯಲ್ಲಿ ಹದಿನೈದು‌ ಕೋಟಿ. ಈ ಮೂಲಕ ಸರಳ ದಸರಾ ನೆಪದಲ್ಲಿ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಲೂಟಿ‌ ಮಾಡಲು ಹೊರಟಿದ್ದಾರೆ. ಹೀಗಾಗಿ ಮಹಿಷನಂತೆ ಚುನಾಯಿತ ಪ್ರತಿನಿಧಿಗಳನ್ನೂ ಧಮನಿಸಲಿ ಚಾಮುಂಡಿ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಯಾವುದೇ ಆಶೀರ್ವಾದ ಸಿಗುವುದಿಲ್ಲ. ಜನರ ಆರೋಗ್ಯ ಕಾಪಾಡಿದಾಗ ಮಾತ್ರ ಚಾಮುಂಡಿ ಆಶೀರ್ವಾದ ಸಿಗುತ್ತದೆ. ಹೀಗಾಗಿ  ಕೋವಿಡ್ ತುರ್ತು ಸಂದರ್ಭದಲ್ಲಿ ‌ಜನಪರ ಕಾಳಜಿ‌ ಇದ್ದರೆ ಆಸ್ಪತ್ರೆಗಳಿಗೆ ಸೌಲಭ್ಯ ಒದಗಿಸಲಿ ಎಂದು ಸಲಹೆ ನೀಡಿದ ಪ್ರೊ. ನಂಜರಾಜೇ ಅರಸ್, ದುಡ್ಡು ತಿನ್ನಲು ಸಾವು ಸಾಧನ ಅಂದಿಕೊಂಡಿದೆ ರಾಜ್ಯ ಸರ್ಕಾರ ಜನರ ಆರೋಗ್ಯ , ಬದುಕಿನ ಬಗ್ಗೆ ಕಾಳಜಿ‌ ಇದ್ದರೆ ಆಕ್ಸಿಜನ್, ವೆಂಟಿಲೇಟರ್ ಸೌಲಭ್ಯದ ಮೂಲಕ ಬದುಕನ್ನ ಕಟ್ಟುಕೊಡಲಿ. ಈಗಿಲ್ಲದ ಚಾಮುಂಡಿಯ ನಂಬಿಕೆಗೋಸ್ಕರ ಪ್ರವಾಸೋದ್ಯಮದ ಹೆಸರಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಬೇಡ ಎಂದಿದ್ದಾರೆ.mysore-dasara-crore-prof-nanjaraje-arus-outrage-against-government

ಸರಳ ದಸರಾ ಎಂದರೆ ಇವರಿಗೆ ಹದಿನೈದು ಕೋಟಿ. ಅದ್ದೂರಿ ದಸರಾ ಎಂದರೆ ಅದೆಷ್ಟು ಕೋಟಿಯೋ ಗೊತ್ತಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದ ನಂಜರಾಜೇ ಅರಸ್, ಈ ಹದಿನೈದು ಕೋಟಿಯಲ್ಲಿ‌ ಅರಮನೆಯೊಳಗೆ ಸಾಂಸ್ಕೃತಿಕ, ‌ಮೆರವಣಿಗೆ ಕಾರ್ಯಕ್ರಮಗಳ ಮೂಲಕ ದುಡ್ಡು ತಿನ್ನಲು ಹೊರಟಿದ್ದಾರೆ. ಯಾತಕ್ಕಾಗಿ ಈ ಅಧಿಕಾರಿಗಳಿಗೆ, ಮಂತ್ರಿಗಳಿಗೆ ಈ ದುಡ್ಡು ತಿನ್ನುವ ಚಪಲ. ಬಡವರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗದೆ ಸಾಯ್ತಾ ಇದ್ದಾರೆ. ದೊಡ್ಡ ದೊಡ್ಡ ಅಸ್ಪತ್ರೆಗಳಿಗೆ ಹೋಗಲು ಸಾಧ್ಯವಾಗದೆ  ಸಾವನ್ನಪ್ಪುತ್ತಿದ್ದಾರೆ.ಮನೆ ಮಠ, ಆಸ್ತಿ ಮಾರಿ ಚಿಕಿತ್ಸೆ ಪಡೆಯುವ ಪರಿಸ್ಥಿತಿ ಬಡವರಿಗೆ ಎದುರಾಗಿದೆ. ಈ ವಿಜೃಂಭಣೆಯ ದಸರಾ ಬದಲು ಜನರಿಗೆ ವೈದ್ಯಕೀಯ ಸೌಲಭ್ಯ ನೀಡಲು‌ ಮುಂದಾಗಿ. ಯಾಕೆ ಈ ರೀತಿಯ ಮನೆಹಾಳು ಕೆಲಸ ಮಾಡಲು ಹೊರಟಿದೆ ಸರ್ಕಾರ ಎಂದು ಇತಿಹಾಸ ತಜ್ಞ ಪ್ರೊ.ನಂಜರಾಜೆಅರಸ್  ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Key words: mysore dasara- Crore-Loot-Prof. Nanjaraje Arus –outrage- against -government.