ಮೈಸೂರಿಗೆ ಮತ್ತೆ ಸ್ವಚ್ಛನಗರಿ ಗರಿ: ಸಚಿವ ಎಸ್.ಟಿ ಸೋಮಶೇಖರ್ ಮೆಚ್ಚುಗೆ ವ್ಯಕ್ತಪಡಿಸಿದ್ದು ಹೀಗೆ…

ಮೈಸೂರು, ಆಗಸ್ಟ್, 20, 2020(www.justkannada.in)  ಮೈಸೂರಿಗೆ ಮತ್ತೆ ಸ್ವಚ್ಛನಗರಿ ಗರಿ ದೊರೆತಿರುವುದಕ್ಕೆ, ಸಾಂಸ್ಕೃತಿಕ ರಾಜಧಾನಿ ಎಂದು ಕರೆಯುವ ಮೈಸೂರನ್ನು ಇನ್ನು ಮುಂದೆ ಸ್ವಚ್ಚತಾ ನಗರದ ರಾಜಧಾನಿ ಎಂದು ಕರೆಯಬಹುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಸಂತೋಷ ವ್ಯಕ್ತಪಡಿಡಿದ್ದಾರೆ.

ಮೈಸೂರು ಕೇಂದ್ರ ಸರ್ಕಾರದಿಂದ ಪುರಸ್ಕಾರಗೊಳ್ಳಲಿರುವ ಸ್ವಚ್ಛತಾ ನಗರಿಗಳ ಪ್ರಶಸ್ತಿಗೆ ಸತತವಾಗಿ ಒಂದಿಲ್ಲೊಂದು ವಿಭಾಗದ ಮೂಲಕ ಆಯ್ಕೆಯಾಗುತ್ತಲೇ ಬಂದಿರುವುದು ನಮ್ಮೆಲ್ಲರಿಗೂ ಸಂತೋಷದ ವಿಷಯ ಎಂದು ತಿಳಿಸಿದ್ದಾರೆ.

ಪ್ರಸ್ತುತ 3 ಲಕ್ಷದಿಂದ 10 ಲಕ್ಷ ಜನಸಂಖ್ಯೆ ಇರುವ ನಗರಗಳ ಟಾಪ್ 10 ನಗರಗಳ ಪಟ್ಟಿಯಲ್ಲಿ ಮೈಸೂರಿಗೆ 1ನೇ ಸ್ಥಾನ ಲಭಿಸಿದ್ದು, ನಮ್ಮ ಮೈಸೂರು, ನಮ್ಮ ಹೆಮ್ಮೆ ಎಂಬುದು ಈಗ ಮತ್ತೊಮ್ಮೆ ಸಾಬೀತಾಗಿದೆ.
ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕವು 11ನೇ ಸ್ಥಾನದಲ್ಲಿರುವುದು ಸಹ ಹೆಮ್ಮೆಯ ವಿಷಯ. ಇನ್ನು 10 ಲಕ್ಷ ಜನಸಂಖ್ಯೆಯಿರುವ ನಗರಗಳಲ್ಲಿ ಬೆಂಗಳೂರು 37ನೇ ಸ್ಥಾನದಲ್ಲಿರುವುದು ಸಮಾಧಾನಕರ ಸಂಗತಿಯಾಗಿದ್ದು, ಮುಂದಿನ ದಿನಗಳಲ್ಲಿ ಟಾಪ್ 10 ಪಟ್ಟಿಯೊಳಗೆ ಬರಲು ಎಲ್ಲರ ಸಹಕಾರ ಅಗತ್ಯ ಎಂದು ಮನವಿ ಮಾಡಿದ್ದಾರೆ.mysore-called-capital-swachatta-minister-s-t-somashekar

ಮೈಸೂರು ಭಾಗದ ಜನಪ್ರತಿನಿಧಿಗಳು, ಅಧಿಕಾರಿಳು, ಪಾಲಿಕೆ ಸಿಬ್ಬಂದಿ ಸೇರಿದಂತೆ ಪೌರ ಕಾರ್ಮಿಕರ ಶ್ರಮ ಸಾಕಷ್ಟಿದ್ದು, ಎಲ್ಲರಿಗೂ ಅಭಿನಂದನೆ. ಮುಂದಿನ ದಿನಗಳಲ್ಲಿ ಇದೇ ರೀತಿಯ ಶ್ರಮವಹಿಸಿ ಮೈಸೂರಿಗೆ ಲಭಿಸಿರುವ ಈ ನಂಬರ್ 1 ಪಟ್ಟವನ್ನು ನಾವು ಉಳಿಸಿಕೊಂಡು ಹೋಗಬೇಕಾದ ಮಹತ್ತರ ಜವಾಬ್ದಾರಿ ನಮ್ಮದು ಎಂದು ಹೇಳಿದ್ದಾರೆ.

ಸರ್ಕಾರದ ಯಾವುದೇ ಒಂದು ಯೋಜನೆಗಳಿರಲಿ ಅವುಗಳ ಸಮರ್ಪಕ ಅನುಷ್ಠಾನಕ್ಕೆ ಜನಪ್ರತಿನಿಧಿಗಳು, ಅಧಿಕಾರಿಗಳ ಇಚ್ಛಾಶಕ್ತಿ ಬೇಕಾಗುತ್ತದೆ. ಆ ಇಚ್ಛಾಶಕ್ತಿ ಮೈಸೂರಿನ ಆಡಳಿತದಲ್ಲಿ ನಾವು ಕಾಣುತ್ತಿದ್ದೇವೆ. ಇದೆಲ್ಲದರ ಜೊತೆಗೆ ಮೈಸೂರಿನ ನಾಗರಿಕ ಪಾತ್ರವನ್ನೂ ನಾವು ಶ್ಲಾಘಿಸಬೇಕು. ಸಾರ್ವಜನಿಕರ ಪಾತ್ರ ಹಾಗೂ ಸಹಭಾಗಿತ್ವವೂ ನಮಗೆ ಅಷ್ಟೇ ಮುಖ್ಯವಾಗುತ್ತದೆ. ಇನ್ನು ಮುಂದೂ ಸಹ ಇದೇ ರೀತಿಯ ಸಹಕಾರವನ್ನು ಕೋರುತ್ತೇನೆ ಎಂದು ಮನವಿ ಮಾಡಿದ್ದಾರೆ.
Key words : mysore-called-capital-swachatta-minister-s.t.somashekar