ಕ್ರೀಡಾ ವಸತಿ ನಿಲಯಕ್ಕೆ ಸಚಿವ ನಾರಾಯಣಗೌಡ  ಭೇಟಿ, ಪರಿಶೀಲನೆ

ಮಡಿಕೇರಿ ಜು.1,2021(www.justkannada.in): ನಗರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕಚೇರಿಗೆ ಭೇಟಿ ನೀಡಿದ ಸಚಿವ ನಾರಾಯಣಗೌಡ  ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರ ವಸತಿ ನಿಲಯಗಳನ್ನು ವೀಕ್ಷಿಸಿದರು.jk

ವಿದ್ಯಾರ್ಥಿಗಳ ಕೊಠಡಿ ಮತ್ತು ಮೇಲ್ವಿಚಾರಣೆಯನ್ನು ಪರೀಶೀಲಿಸಿದ ಸಚಿವ ನಾರಾಯಣಗೌಡ ಗುಣಮಟ್ಟದ ಹಾಸಿಗೆ, ಸ್ಟಡಿ ಟೇಬಲ್‍ ಗಳನ್ನು ವಿದ್ಯಾರ್ಥಿಗಳ ಅನುಕೂಲಕ್ಕೆ ಅನುಗುಣವಾಗಿ ನಿರ್ಮಿಸುವಂತೆ ಸಲಹೆ ನೀಡಿದರು.

ವಸತಿ ನಿಲಯಗಳು, ಕ್ರೀಡಾಂಗಣಗಳು ಅದರ ಸುತ್ತಮುತ್ತ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಅನಗತ್ಯ ವಸ್ತುಗಳನ್ನು ನಿಲಯದ ಸುತ್ತಮುತ್ತಲಿನ ಆವರಣದಲ್ಲಿ ಹಾಕಬಾರದು, ಕಸ ವಿಲೇವಾರಿ ಕೆಲಸಗಳು ತ್ವರಿತಗತಿಯಲ್ಲಿ ಜರುಗಬೇಕು. ವಿದ್ಯಾರ್ಥಿಗಳ ಅರೋಗ್ಯ ದೃಷ್ಠಿಯಿಂದ ಸಂಬಂಧಪಟ್ಟ ಇಲಾಖೆಗಳು ಕಾರ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.

ನಂತರ ಜಿಲ್ಲಾ ಕ್ರೀಡಾಂಗಣಕ್ಕೆ ಭೇಟಿ ನೀಡಿದ ಸಚಿವ ನಾರಾಯಣ್ ಗೌಡ ಕ್ರಿಡಾಂಗಣದ ಸ್ವಚ್ಛತೆ, ಆಗಬೇಕಾಗಿರುವ ಅಭಿವೃದ್ಧಿ ಕಾಮಗಾರಿಗಳು, ಕ್ರಿಡಾಸಾಮಗ್ರಿಗಳ ಗುಣಮಟ್ಟ, ಮೊದಲಾದ ವಿಷಯಗಳ ಬಗ್ಗೆ ಹಾಗೂ  ತರಬೇತುದಾರರಿಂದ ಕ್ರೀಡಾಭಿವೃದ್ಧಿ ಸವಲತ್ತುಗಳ ಸಮರ್ಪಕ ಬಳಕೆಯ ಮಾಹಿತಿಯನ್ನು ಪಡೆದರು.

ಶಾಸಕರಾದ ಸುನೀಲ್ ಸುಬ್ರಮಣಿ, ಜಿಲ್ಲಾಧಿಕಾರಿ ಚಾರುಲತ್ ಸೋಮಲ್, ಜಿ.ಪಂ ಸಿಇಒ ಭನ್ವರ್ ಸಿಂಗ್ ಮೀನಾ, ಉಪ ವಿಭಾಗಾಧಿಕಾರಿ ಈಶ್ವರ್ ಕುಮಾರ್ ಖಂಡು, ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ, ಯುವ ಸಬಲೀಕರಣ ಇಲಾಖೆ ಆಯುಕ್ತರಾದ ಗೋಪಾಲಕೃಷ್ಣ, ಯುವ ಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕರಾದ ಗುರುಸ್ವಾಮಿ ಇತರರು ಇದ್ದರು.

Key words: Minister -Narayana Gowda-visit – Sports Hostel