ಹೋರಾಟಕ್ಕೆ ಸಿದ್ಧ: ಮಹಾರಾಷ್ಟ್ರಕ್ಕೆ ಒಂದು ಅಡಿ ಜಾಗವನ್ನೂ ಕೊಡಲ್ಲ- ಉದ್ಧವ್ ಠಾಕ್ರೆ ವಿರುದ್ಧ ವಾಟಾಳ್ ನಾಗರಾಜ್ ಆಕ್ರೋಶ…

ಬೆಂಗಳೂರು,ಜನವರಿ,18,2021(www.justkannada.in): ಮರಾಠಿ ಮಾತನಾಡುವ ಪ್ರದೇಶಗಳು ನಮಗೆ ಸೇರಿದ್ದು  ಕೆಲ ಭಾಗಗಳನ್ನ ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳುತ್ತೇವೆ ಎಂದು ಟ್ವೀಟ್ ಮಾಡಿ ಹೇಳಿಕೆ ನೀಡಿರುವ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಕಿಡಿಕಾರಿದ್ದಾರೆ.jk

ಈ ಹೇಳಿಕೆ ಕುರಿತು ಮಾತನಾಡಿರುವ ವಾಟಾಳ್ ನಾಗರಾಜ್, ನಾವು ಹೋರಾಟ ಮಾಡಲು ಸಿದ್ಧರಿದ್ದೇವೆ. ಬೆಳಗಾವಿಗೆ ಹೋಗಿ ಹೋರಾಟ ಮಾಡುತ್ತೇವೆ.ಕನ್ನಡಕ್ಕಾಗಿ  ನಾವು ಜೈಲಿಗೆ ಹೋಗಲೂ ಸಿದ್ಧ. ಮಹಾರಾಷ್ಟ್ರಕ್ಕೆ ಒಂದು ಅಡಿ ಜಾಗವನ್ನೂ ಬಿಟ್ಟುಕೊಡುವುದಿಲ್ಲ ಎಂದು ಹೇಳಿದರು.Maharashtra -not given - foot space- Uddhav Thackeray –kannada-Vatal Nagaraj

ಸಿಎಂ ಬಿಎಸ್ ವೈಗೆ ಶಕ್ತಿ ಇಲ್ಲ. ಮರಾಠಿ ಸಭೆಗಳಿಗೆ ಅವಕಾಶ ಕೊಡಬಾರದು. ಉದ್ಧವ್ ಠಾಕ್ರೆ ಕರ್ನಾಟಕ್ಕೆ ಬರದಂತೆ ತಡೆಯಬೇಕು ಎಂದು ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದರು.

Key words: Maharashtra -not given – foot space- Uddhav Thackeray –kannada-Vatal Nagaraj