ಯುಗಾದಿ ಹಬ್ಬದಲ್ಲಿ ಚಂದ್ರನ ದರ್ಶನ ಏಕೆ ಮಾಡುತ್ತಾರೆ , ಅದರಿಂದ ದೊರೆಯುವ ಫಲ ಏನು ತಿಳಿದುಕೊಳ್ಳೋಣ ಬನ್ನಿ

 

ಯುಗಾದಿ ಹಬ್ಬದಲ್ಲಿ ಬೇವು-ಬೆಲ್ಲಕ್ಕಿರುವಷ್ಟೇ ಪ್ರಾಧಾನ್ಯತೆ ಅಭ್ಯಂಜನ, ಪಂಚಾಂಗ ಶ್ರವಣ, ಮುಂತಾದವುಗಳಿಗಿರುತ್ತದೆ. ಆದರೆ, ಇದಕ್ಕಿಂತಲೂ ಹೆಚ್ಚು ವಿಶೇಷತೆಯಿರುವುದು ಹಬ್ಬದ ದಿವಸ ಸಂಜೆಯ ಚಂದ್ರ ದರ್ಶನಕ್ಕೆ. ಹಾಗಾದರೆ, ಚಂದ್ರನನ್ನು ಯುಗಾದಿ ದಿನದಂದು ನೋಡಲು ಪ್ರಮುಖವಾದ ಕಾರಣಗಳಿವೆ. ಈ ಕಾರಣಗಳು ಯಾವುವು ಎಂಬುದನ್ನು ಅರಿತುಕೊಳ್ಳೋಣ.

ಗಣಪತಿಯು ತನ್ನ ವಾಹನವಾದ ಇಲಿಯನ್ನೇರಿ ಹೋಗುತ್ತಿರುವಾಗ ಆಯ ತಪ್ಪಿ, ಗಣೇಶ ಇಲಿಯ ಮೇಲಿಂದ ಕೆಳಗೆ ಬೀಳುತಾನೆ. ಇದನ್ನು ಕಂಡು ಚಂದ್ರ ಮೇಲಿನಿಂದ ಗಹಗಹಿಸಿ ನಗುತ್ತಾನೆ. ಇದನ್ನು ಕಂಡಂತಹ ಗಣೇಶನು ಚೌತಿಯ ದಿನದಂದು ಅಂದರೆ ಗಣೇಶ ಚತುರ್ಥಿಯಂದು ನೋಡಿದರೆ ಅಪವಾದ ಬರುತ್ತದೆ ಎಂದು ಶಾಪವಿತ್ತಾಗ ಶಾಪ ವಿಮೋಚನೆಗಾಗಿ ಯುಗಾದಿ ಚಂದ್ರನ ದರ್ಶನದಿಂದ ಪಾಪ ಪರಿಹಾರವಾಗುವುದರೊಂದಿಗೆ ಮುಕ್ತಿಯು ದೊರೆಯುತ್ತದೆಂಬ ನಂಬಿಕೆ ಬಹಳ ಹಿಂದಿನದು.

ನವತಾರೆಗಳ ಅಧಿಪತಿ

ಚಂದ್ರನು ನವಗ್ರಹಗಳಲ್ಲೊಂದು ತಾರೆ. ಶುದ್ಧತೆ, ಬುದ್ಧಿವಂತಿಕೆ ಹಾಗೂ ಉತ್ತಮ ನಡವಳಿಕೆಯ ಸಂಕೇತವಾಗಿ ಬಿಂಬಿಸಲಾಗುತ್ತದೆ. ಅಂತಹ ಚಂದ್ರನನ್ನು ವರ್ಷದ ಆಗಿ ಪರ್ವವಾದ ಯುಗಾದಿಯಂದು ವೀಕ್ಷಿಸಿದರೆ ಇಡೀ ವರ್ಷವೆಲ್ಲಾ ಸುಖ-ಸಂತೋಷದಿಂದ ಬಾಳಬಹುದೆಂಬ ನಂಬಿಕೆಯಿಂದ ಹಿಂದಿನಿಂದಲೂ ಯುಗಾದಿ ಚಂದ್ರನನ್ನು ನೋಡುವುದು ವಾಡಿಕೆಯಾಗಿದೆ. ಯುಗಾದಿಯು ಅಮಾವಾಸ್ಯೆಯಲ್ಲಿ ಬರುವುದರಿಂದ ಮರು ದಿವಸದ ಚಂದ್ರನ ದರ್ಶನ ಅಷ್ಟು ಸುಲಭವಲ್ಲ. ಅದಕ್ಕಾಗಿ ಶ್ರಮ ಪಡಬೇಕು. ಕಣ್ಣಲ್ಲಿ ಕಣ್ಣಿಟ್ಟು ನೋಡಬೇಕು. ಹೀಗೆ ಚಂದ್ರ ದರ್ಶನ ಮಾಡಿ ®ಮಿಸಿದರೆ ವರ್ಷವೆಲ್ಲಾ ಸಂತಸದಿಂದ ಇರಬಹುದು.

ಮಳೆ-ಬೆಳೆಯ ಧ್ಯೋತಕ

ಯುಗಾದಿ ದಿನದಂದು ಕಾಣಿಸುವ ಚಂದ್ರನನ್ನು ಆಧÜರಿಸಿ ಹಿಂದೆ ವರ್ಷದ ಮಳೆ-ಬೆಳೆ, ರೋಗ-ರುಜಿನಗಳು, ಏಳು-ಬೀಳುಗಳ ಬಗ್ಗೆ ಚಿಂತನೆ ಮಾಡುತ್ತಿದ್ದರು. ಯುಗಾದಿಯಂದು ಚಂದ್ರನು ಅತ್ಯಂತ ಚಿಕ್ಕದಾಗಿ ಒಂದು ಪುಟ್ಟ ಗೆರೆಯ ರೀತಿಯಲ್ಲಿ ವೀಕ್ಷಿಸಲು ಕಾಣ ಸಿಗುವುದರಿಂದ ಚಂದ್ರನ ಆಕಾರವನ್ನು ಆಧÜರಿಸಿ ವರ್ಷದ ಭವಿಷ್ಯವನ್ನು ನಿರ್ಧರಿಸುತ್ತಿದ್ದರು. ಅದಕ್ಕೆಂದೇ ಹೊಸ ವರ್ಷದ ಪಂಚಾಂಗವನ್ನು ಪಠಿಸಿ, ಅನಂತರ ಚಂದ್ರ ದರ್ಶನವನ್ನು ಮಾಡುತ್ತಿದ್ದರು.

 

 

key words : dina-bhavishya-ugadi-festival-moon-watch