ಇಬ್ಬರು ಮಕ್ಕಳನ್ನ ಕೊಂದು ಬಳಿಕ ತಾವೂ ಆತ್ಮಹತ್ಯೆಗೆ ಶರಣಾದ ದಂಪತಿ…

ಬಳ್ಳಾರಿ, ಜನವರಿ 6,2021(www.justkannada.in): ದಂಪತಿ  ತಮ್ಮ ಇಬ್ಬರು ಮಕ್ಕಳನ್ನ ಕೊಂದು ಬಳಿಕ ತಾವೂ  ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ.jk-logo-justkannada-mysore

ಜಿಲ್ಲೆಯ ಹೊಸಪೇಟೆ ತಾಲೂಕಿನ ಗಾದಿಗನೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ನಂಜುಂಡೇಶ್ವರ(32) ಹಾಗೂ ಪತ್ನಿ ಪಾರ್ವತಿ(28) ಆತ್ಮಹತ್ಯೆಗೆ ಶರಣಾದವರು.  ಆತ್ಮಹತ್ಯೆಗೂ ಮುನ್ನ ತಮ್ಮ ಮಕ್ಕಳಾದ ಮೂರು ವರ್ಷದ ಗೌತಮಿ ಹಾಗೂ 2 ವರ್ಷದ ಮಗ ಸ್ವರೂಪ್ ರನ್ನ ಕೊಂದಿದ್ದಾರೆ ಎನ್ನಲಾಗಿದೆ.Couple -committing -suicide –after- killing- two children-ballari

ಮೃತ ನಂಜುಂಡೇಶ್ವರ ಬಳ್ಳಾರಿ ಜಿಲ್ಲೆ ಹೋಸಪೇಟೆ ತಾಲ್ಲೂಕಿನಲ್ಲಿರುವ ಜಿಂದಾಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ ಈ ಕುರಿತು ಗಾದಿಗನೂರು ಪೊಲೀಸ್ ಠಾಣಾ ವಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.  ಆತ್ಮಹತ್ಯೆಗೆ ಕಾರಣವೇನೆಂಬುದು ಪೊಲೀಸರ ತನಿಖೆಯ ನಂತರವೇ ತಿಳಿಯಲಿದೆ.

Key words: Couple -committing -suicide –after- killing- two children-ballari