ಜನರ ನಿರ್ಲಕ್ಷ್ಯದಿಂದ ಆರು ರಾಜ್ಯಗಳಲ್ಲಿ ಕೊರೋನಾ ಕೇಸ್ ಹೆಚ್ಚಳ- ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್

ನವದೆಹಲಿ,ಮಾರ್ಚ್,13,2021(www.justkannada.in):  ಜನರ ನಿರ್ಲಕ್ಷ್ಯದಿಂದ ಆರು ರಾಜ್ಯಗಳಲ್ಲಿ ಕೊರೋನಾ ಪ್ರಕರಣ ಹೆಚ್ಚಳವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ತಿಳಿಸಿದರು.jk

ಈ ಕುರಿತು ಇಂದು ಮಾತನಾಡಿದ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್, ದೇಶದ ಹಲವು ಭಾಗಗಳಲ್ಲಿ ಕೊರೊನಾ ವೈರಸ್ (ಕೋವಿಡ್-19) ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನರು ಕೊರೊನಾ ನಿಯಮಗಳನ್ನ ಪಾಲಿಸಬೇಕು. ಮಾಸ್ಕ್ ಧರಿಸಬೇಕು. ದೈಹಿಕ ಅಂತರ ಕಾಪಾಡಿಕೊಳ್ಳಬೇಕು ಎಂದು  ಸಲಹೆ ನೀಡಿದರು.Corona- case -increase - six states -people's –neglect- Union Health Minister- Harshvardhan.

 ಭಾರತದಲ್ಲಿ ಅತ್ಯಂತ ಕಡಿಮೆ ಸಾವುಗಳ ಪ್ರಮಾಣವಿದೆ. ಆದ್ರೆ, ಕೋವಿಡ್ ಸೂಕ್ತ ನಡವಳಿಕೆ ಬಗ್ಗೆ ನಿರ್ಲಕ್ಷ್ಯಕ್ಕೆ ಇದು ಸಕಾಲವಲ್ಲ. ಜನರ ಅಜಾಗರೂಕತೆಯಿಂದಾಗಿ ಆರು ರಾಜ್ಯಗಳಲ್ಲಿ ಪ್ರಕರಣಗಳು ಹೆಚ್ಚುತ್ತಿವೆ. ಹಾಗಾಗಿ ಜನರಿಗೆ ದಯವಿಟ್ಟು ಸಾಮಾಜೀಕ ಅಂತರವನ್ನ ಕಾಪಾಡಿ, ಕೊರೋನಾ ನಿಯಮಗಳನ್ನ ಪಾಲಿಸಿ ಎಂದರು.

Key words: Corona- case -increase – six states -people’s –neglect- Union Health Minister- Harshvardhan.