ಪ್ರವೀಣ್ ಹತ್ಯೆ ಖಂಡನೆ: ಪಿಎಫ್ ಐ, ಎಸ್ ಡಿಪಿಐ ನಿಷೇಧಕ್ಕೆ ಆಗ್ರಹಿಸಿ ರಾಣಿಬೆನ್ನೂರು ಟೌನ್ ಬಂದ್.

ಹಾವೇರಿ,ಆಗಸ್ಟ್, 2,2022(www.justkannada.in):  ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ಹಾವೇರಿ ಜಿಲ್ಲೆ ರಾಣಿಬೆನ್ನೂರಿನ ಟೌನ್ ಬಂದ್ ಗೆ ಹಿಂದೂ ಪರ ಸಂಘಟನೆಗಳು ಕರೆ ನೀಡಿದ್ದು ಈ ಹಿನ್ನೆಲೆಯಲ್ಲಿ ಬಹುತೇಕ   ಅಂಗಡಿಮುಂಗಟ್ಟುಗಳು ಬಂದ್ ಆಗಿವೆ.

ಪ್ರವೀಣ್ ಹತ್ಯೆ ಖಂಡಿಸಿ ಆರೋಪಿಗಳ ವಿರುದ್ಧ ಕಠಿಣಕ್ರಮಕ್ಕೆ ಆಗ್ರಹಿಸಿ ಬಂದ್ ಮಾಡಲಾಗಿದ್ದು,  ಪಿಎಫ್ ಐ ಎಸ್ ಡಿಪಿಐ ಬ್ಯಾನ್ ಮಾಡುವಂತೆ ಹಿಂದೂ ಪರ ಸಂಘಟನೆಗಳು ಆಗ್ರಹಿಸಿದ್ದಾರೆ.  ರಾಣಿ ಬೆನ್ನೂರಿನಲ್ಲಿ ಬಹುತೇಕ   ಅಂಗಡಿ ಮುಂಗಟ್ಟುಗಳು ಬಂದ್  ಆಗಿದ್ದು, ಹಿಂದೂ ಪರ ಸಂಘಟನೆಗಳಿಂದ ರ್ಯಾಲಿ ನಡೆಸಲಾಗುತ್ತಿದೆ.government-new-guideline-confusion-14-day-bandh

ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ತಹಶೀಲ್ದಾರ್ ಗೆ ಹಿಂದೂಪರ ಸಂಘಟನೆ ಕಾರ್ಯಕರ್ತರು ಮನವಿ ಸಲ್ಲಿಸಲಿದ್ದಾರೆ. ರ್ಯಾಲಿಯಲ್ಲಿ ಶಾಸಕ ಅರುಣ್ ಕುಮಾರ್ ಕಾರ್ಯಕರ್ತರು ಭಾಗಿಯಾಗಿದ್ದಾರೆ.

Key words:  Condemnation – Praveen’s- murder- Ranibennur- bandh – ban – PFI, SDPI