ಆಕೆ ಯಾವ ಕೇಸ್  ದಾಖಲಿಸುತ್ತಾರೋ ದಾಖಲಿಸಲಿ: ಎದುರಿಸಲು ಸಿದ್ಧ- ರಮೇಶ್ ಜಾರಕಿಹೊಳಿ….

ಮೈಸೂರು,ಮಾರ್ಚ್,26,2021(www.justkannada.in):  ರಾಸಲೀಲೆ ಸಿಡಿ ಬಿಡುಗಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ದೂರು ನೀಡಲು ಮುಂದಾಗಿರುವ ಹಿನ್ನೆಲೆ ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಆ ಯುವತಿ ಯಾವ ಕೇಸ್ ದಾಖಲಿಸುತ್ತಾರೋ ದಾಖಲಿಸಲಿ ಎದುರಿಸಲು ಸಿದ್ದನ್ನಿದ್ದೇನೆ ಎಂದಿದ್ದಾರೆ.jk

ಈ ಕುರಿತು ಇಂದು ಮಾತನಾಡಿದ ರಮೇಶ್ ಜಾರಕಿಹೊಳಿ, ನಾನು ವಕೀಲರನ್ನ ಭೇಟಿಯಾಗಿ ಚರ್ಚೆ ಮಾಡುತ್ತೇನೆ. ಆ ಯುವತಿ ಯಾವ ಕೇಸ್ ದಾಖಲಿಸುತ್ತಾರೋ ದಾಖಲಿಸಲಿ ಎದುರಿಸಲು ಸಿದ್ದನ್ನಿದ್ದೇನೆ. ಜಗತ್ತಿಗೆ ತನ್ನ ಬೆತ್ತಲೆ ಫೋಟೊ ಪ್ರದರ್ಶಿಸಿರುವ ಯುವತಿ ನನ್ನ ವಿರುದ್ದ ಹೇಳಿಕೆ ಕೋಡುವುದು ದೊಡ್ಡ ವಿಷಯವಲ್ಲ.  ಆಕೆ ದೂರು ಕೊಡಲಿ ಎದುರಿಸಲು ಸಿದ್ಧ. ಕಾನೂನು ಮೂಲಕ ಹೋರಾಟ ಮಾಡುತ್ತೇನೆ ಎಂದಿದ್ದಾರೆ. case-file-women-cd case-former minister-Ramesh jarkiholi

ಯುವತಿ ಅಂದೇ ಹೊರಗೆ ಬಂದು ದೂರು ದಾಖಲಿಸಬೇಕಿತ್ತು. ಈಗ ವಕೀಲರ ಮೂಲಕ ದೂರು ದಾಖಲಿಸುತ್ತಿದ್ದಾಳೆ. ಇದೆಲ್ಲವೂ ಒಂದು ಷಡ್ಯಂತ್ರ ಎಂದು ನಾನು ಅಂದೇ ಹೇಳಿದ್ದೇನೆ ಎಂದರು.

Key words : case-file-women-cd case-former minister-Ramesh jarkiholi