ಬಜೆಟ್ ಅಧಿವೇಶನ ಯಶಸ್ವಿ: 26 ದಿನದ ಕಲಾಪದಲ್ಲಿ ಅರ್ಥಪೂರ್ಣ ಚರ್ಚೆ ನಡೆದಿದೆ- ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ

ಬೆಂಗಳೂರು,ಮಾರ್ಚ್,31,2022(www.justkannada.in): ಬಜೆಟ್ ಅಧಿವೇಶನ ಅತ್ಯಂತ ಯಶಸ್ವಿಯಾಗಿ ನಡೆದಿದೆ. 26 ದಿನ ಕಲಾಪ ನಡೆದಿದ್ದು, 116 ಗಂಟೆ ಕಲಾಪ ನಡೆದಿದೆ. ಕಲಾಪದಲ್ಲಿ ಅರ್ಥಪೂರ್ಣ ಚರ್ಚೆ ನಡೆದಿದ್ದು ಇದಕ್ಕೆ ಕಾರಣೀಕರ್ತರದಾ ಪ್ರತಿಪಕ್ಷದ ನಾಯಕರನ್ನು ಅಭಿನಂದಿಸುತ್ತೇನೆ. ಸದಸ್ಯರು ಉತ್ಸಾಹದಲ್ಲಿ ಕಾರ್ಯಕಲಾಪದಲ್ಲಿ ಪಾಲ್ಗೊಂಡರು. ಸದನದ ಗೌರವ ಹೆಚ್ಚಿಸಿದ ಅಧಿವೇಶನ ಇದಾಗಿತ್ತು ಎಂದು ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ  ಹೇಳಿದರು.

ಇಂದು ಪತ್ರಿಕಾಗೋಷ್ಠಿ ನಡೆಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಿಷ್ಟು.

ಅಧಿವೇಶನಗಳು ಚನ್ನಾಗಿ ನಡೆದರೆ ಜನಸಾಮಾನ್ಯರಲ್ಲಿ ವಿಶ್ವಾಸ ಹೆಚ್ಚಿಸಲು ಕಾರಣ ಆಗುತ್ತದೆ.  ಆಯವ್ಯಯದ ಮೇಲೆ ಸಿಎಂ ಭಾಷಣ ಮಾಡಿದ ಮೇಲೆ ಸದಸ್ಯರು 23 ಗಂಟೆ ಚರ್ಚೆ ಮಾಡಿದ್ದಾರೆ. ಬೇಡಿಕೆಗಳ ಮೇಲಿನ ಚರ್ಚೆಯಲ್ಲಿ 27 ಗಂಟೆ ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಈ ಬಾರಿ ಸಚಿವರು ಉತ್ತರ ಕೊಟ್ಟಿದ್ದಾರೆ. ಹೊಸ ಶಾಸಕರಿಗೆ ಈ ಬಗ್ಗೆ ಒಂದು ವ್ಯವಸ್ಥೆ ಇದೆ ಅನ್ನುವುದನ್ನು ಮನವರಿಕೆಯಾಯಿತು.  ಸದಸ್ಯರಿಗೆ ಹೇಗೆ ಚರ್ಚೆಯಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಯಿತು.  ಸಮಿತಿಗಳ ವರದಿಗಳು,13 ವಿಧೆಯಕಗಳ ಅಂಗೀಕಾರ, ನಿಯಮ 69 ರಡಿ 6 ಸೂಚನೆಗಳ ಚರ್ಚೆ ಮಾಡಲಾಗಿದೆ. 405 ಪ್ರಶ್ನೆಗಳಿಗೆ 355 ಪ್ರಶ್ನೆಗಳಿಗೆ ಉತ್ತರ ನೀಡಲಾಗಿದೆ. ಶೂನ್ಯವೇಳೆಯಲ್ಲಿ 46 ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.

ಈ ಬಾರಿ.ಕಲಾಪ ನೋಡಲು ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿತ್ತು. 10419 ಜನರು ಸದನವನ್ನು ನೋಡಿದ್ದಾರೆ. ಕೆಲವು ವಿದೇಶಿ ಗಣ್ಯರು,ಹೋರ ರಾಜ್ಯಗಳ ಗಣ್ಯರು ಆಗಮಿಸಿದ್ದು ನೋಡಿದ್ದೇವೆ. ಈ ಬಾರಿಯ ಅಧಿವೇಶನದಲ್ಲಿ ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆ ತರುವ ವಿಷಯದ ಮೇಲೆ ಎರಡು ದಿನ ಚರ್ಚೆ ನಡೆದಿರುವುದು ಹೆಮ್ಮೆಯ ವಿಷಯವಾಗಿದೆ. ಅನೇಕ ಹೊಸ ರೀತಿಯ ವಿಷಯಗಳ ಚರ್ಚೆ ನಡೆಸಲಾಗುತ್ತಿದೆ.17. ಜನ ಸದಸ್ಯರು 10 ಗಂಟೆಗಳ ಕಾಲ ಚರ್ಚೆ ನಡೆಸಿದ್ದಾರೆ. ಎಲ್ಲರೂ ಮುಕ್ತವಾಗಿ ಮಾತನಾಡಿದ್ದಾರೆ ಎಂದು ಸ್ಪೀಕರ್ ಕಾಗೇರಿ ತಿಳಿಸಿದರು.

ಏಪ್ರಿಲ್ 10 ರಿಂದ ಗೌಹಾತಿಯಲ್ಲಿ ವಿಧಾನಸಭಾಧ್ಯಕ್ಷರ ಸಭೆ ಇದೆ. ನಮ್ಮ ವಿಧಾನಸಭೆಯಲ್ಲಿ ಇಷ್ಟೆಲ್ಲ ವಿಷಯಗಳ ಬಗ್ಗೆ ಚರ್ಚೆಯಾಗುತ್ತಿರುವ ಬಗ್ಗೆ ಎಲ್ಲ ರಾಜ್ಯಗಳ ವಿಧಾನಸಭೆಗಳಲ್ಲಿ ಚರ್ಚೆಯಾಗುವ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ. ಈ ಬಾರಿ ಅಧಿವೇಶನದಲ್ಲಿ 82 ರಷ್ಟು ಹಾಜರಾತಿ ಇತ್ತು. ನಮ್ಮ ವಿಧಾನ ಪರಿಷತ್ತಿಗೆ ನೂರಾರು ವರ್ಷದ ಇತಿಹಾಸ ಇದೆ. ಇತ್ತೀಚಿನ ದಿನಗಳಲ್ಲಿ ವಿಧಾನ ಪರಿಷತ್ತು ಚುನಾವಣೆಗಳು ಹೇಗೆ ನಡೆದಿವೆ. ವಿಧಾನ ಪರಿಷತ್ತಿನಲ್ಲಿ  ನಡೆದ ಘಟನೆಗಳನ್ನು ಜನರು ನೋಡುತ್ತಿದ್ದಾರೆ. ನಾನು ವಿಧಾನ ಮಂಡಲದ ಅಧ್ಯಕ್ಷ ಅದರ ಸುಧಾರಣೆಗೆ ನಾವೆಲ್ಲರೂ ಕಾರಣೀಕರ್ತರಾಗಬೇಕು. ಪರಿಷತ್ತಿನಿಂದಲೇ ಚುನಾವಣಾ ಸುಧಾರಣೆ ಬಗ್ಗೆ ಚರ್ಚೆ ನಡೆಯಬೇಕಿತ್ತು. ಅಲ್ಲಿ ಸುಧಾರಣಾ ಪುಸ್ತಕ ವಿತರಣೆಗೆ ವಿರೋಧ ಮಾಡುವ ಮನಸ್ಥಿತಿ ಇದ್ದರೆ ಅವರ ಮಾನಸಿಕ ಸ್ಥಿತಿ ಹೇಗಿದೆ ಅಂತ ಬಿಡಿಸಿ ಹೇಳುವ ಅಗತ್ಯವಿಲ್ಲ.

ಈ ವಿಷಯ ಸಾರ್ವಜನಿಕ ಚರ್ಚೆಗೆ ಒಳಪಡಬೇಕು ಅಂತ ಅನೇಕ ಗಣ್ಯರಿಗೆ ಚರ್ಚೆ ನಡೆಸುವಂತೆ ಪತ್ರ ಬರೆದಿದ್ದೇನೆ. ಕಾನೂನು ಕಾಲೇಜುಗಳಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದೆ. ನಾನು ಹೋದ.ಕಡೆಗಳಲ್ಲಿ ಈ ವಿಷಯ ಚರ್ಚೆ ಮಾಡುತ್ತಿದ್ದೇನೆ. ಚುನಾವಣೆ ಸುಧಾರಣೆ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ಮಾಡುವ ಬಗ್ಗೆ ಲೋಕಸಭಾ ಸ್ಪೀಕರ್ ಗೆ ಪತ್ರ ಬರೆದಿದ್ದೇನೆ. ಏಪ್ರಿಲ್ 10ಕ್ಕೆ ಗೌಹಾತಿಯಲ್ಲಿ ಸ್ಪೀಕರ್ಸ್ ಕಾನ್ಪರೆನ್ಸ್ ಇದೆ. ಅಲ್ಲಿ ಅವರ ಗಮನಕ್ಕೆ ತರುತ್ತೇನೆ.  ಈ ವರ್ಷ ಆರಂಭದಲ್ಲಿ 26 ದಿನ ನಡೆದಿದೆ. ಈ ವರ್ಷ ಕನಿಷ್ಠ 60 ದಿನ ನಡೆಸುವ ವಿಶ್ವಾಸ ಇದೆ. ಮುಖ್ಯಮಂತ್ರಿಗಳು ಈ ವ್ಯವಸ್ಥೆ ಬಲ ಪಡಿಸುವ ಪ್ರಯತ್ನ ನಡೆಸಿದ್ದಾರೆ ಎಂದರು.

Key words: Budget –session- successful- Speaker -Vishweshwara Hegde Kageri