ರಾಜಕೀಯ ಬೇಜಾರಾದ್ರೆ ರಾಜೀನಾಮೆ ಕೊಡ್ತೀನಿ: ಆದ್ರೆ ಬಿಜೆಪಿಗೆ ಮಾತ್ರ ಸೇರಲ್ಲ- ಕಾಂಗ್ರೆಸ್ ಶಾಸಕ…

ಕೊಪ್ಪಳ,ಜು,1,2019(www.justkannada.in):  ನನಗೆ ರಾಜಕೀಯ ಬೇಜಾರಾದ್ರೆ ರಾಜೀನಾಮೆ ಕೊಡ್ತೀನಿ. ಆದ್ರೆ ಬಿಜೆಪಿಗೆ ಮಾತ್ರ ಸೇರಲ್ಲ ಎಂದು ಕುಷ್ಟಗಿ ಕಾಂಗ್ರೆಸ್ ಶಾಸಕ ಅಮರೇಗೌಡ ಬಯ್ಯಪುರ ಸ್ಪಷ್ಟನೆ ನೀಡಿದ್ದಾರೆ.

ವಿಜಯನಗರ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಸ್ಪೀಕರ್  ರಮೇಶ್ ಕುಮಾರ್ ಗೆ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬ ಸುದ್ದಿ ಹರಡಿದೆ. ಆದರೇ  ಈ ಬಗ್ಗೆ ಸ್ಪಷ್ಟನೆ ನೀಡಿರುವ ಸ್ಪೀಕರ್ ರಮೇಶ್ ಕುಮಾರ್ ನನಗೆ ಯಾರೂ ಬಂದು ರಾಜೀನಾಮೆ ನೀಡಿಲ್ಲ ಎಂದಿದ್ದಾರೆ.

ಇನ್ನು ಸಮ್ಮಿಶ್ರ ಸರ್ಕಾರದ ವಿರುದ್ದ ಅಸಮಾಧಾನಗೊಂಡಿರುವ  ಕೆಲವು ಶಾಸಕರು ಸಹ ಶಾಸಕ ಆನಂದ್ ಸಿಂಗ್ ಅವರ ಹಾದಿಯನ್ನೇ ಹಿಡಿಯಲಿದ್ದಾರೆಯೇ ಎಂಬ ಪ್ರಶ್ನೆ ಮೂಡಿದೆ. ಹೀಗಾಗಿ  ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಶಾಸಕ ಅಮರೇಗೌಡ ಬಯ್ಯಪುರ,  ರಾಜಕೀಯದಲ್ಲಿ ಬೇಜಾರಾದರೇ ರಾಜೀನಾಮೆ ಕೊಟ್ಟು ಮನೆಗೆ ಹೋಗ್ತೇನೆ. ಆದರೆ ಬಿಜೆಪಿ ಸೇರಲ್ಲ. ಬಿಜೆಪಿ ಸೇರುವ ಪ್ರಶ್ನೆಯೇ ಇಲ್ಲ. ಆನಂದ್ ಸಿಂಗ್ ಗೆ ಬಿಜೆಪಿ ಬೇಕಾಗಿದೆ. ಹೀಗಾಗಿ ರಾಜೀನಾಮೆ ಕೊಟ್ಟಿದ್ದಾರೆ ಎಂದರು.

Key words: bore- resigns – politics-congress -MLA