ರಾಜ್ಯಾದ್ಯಂತ 12 ಸಾವಿರ ಬಸ್ ಸಂಚಾರ: ಪ್ರಯಾಣಿಕರಿಗೆ ತೊಂದರೆಯಾಗದಂತೆ ಕ್ರಮ- ಡಿಸಿಎಂ ಲಕ್ಷ್ಮಣ್ ಸವದಿ…

ಬೆಂಗಳೂರು,ಏಪ್ರಿಲ್,27,2021(www.justkannada.in): ರಾಜ್ಯದಲ್ಲಿ ಕೊರೋನಾ  2ನೇ ಅಲೆ ಅಬ್ಬರ ಜೋರಾಗಿದ್ದು ಈ ಹಿನ್ನೆಲೆಯಲ್ಲಿ ಇಂದು ರಾತ್ರಿಯಿಂದ 14 ದಿನಗಳ ಕಾಲ ಜನತಾ ಕರ್ಫ್ಯೂವನ್ನ ಸರ್ಕಾರ ಘೋಷಣೆ ಮಾಡಿದೆ.  ಹೀಗಾಗಿ ಬೆಂಗಳೂರು, ಮೈಸೂರು  ಸೇರಿ ಪ್ರಮುಖ ನಗರಗಳಿಂದ ಜನರು ತಮ್ಮ ತಮ್ಮಊರುಗಳತ್ತ  ತೆರಳುತ್ತಿದ್ದಾರೆ.jk

ಹೀಗಾಗಿ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿದೆ. ಈ ಬಗ್ಗೆ ಮಾತನಾಡಿರುವ ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿ, ರಾಜ್ಯದಲ್ಲಿ 12 ಸಾವಿರ  ಬಸ್ ಸಂಚಾರವಿದೆ. ಪ್ರಯಾಣಿಕರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ.  ಕೊರೋನಾ ನಿಯಮ ಪಾಲಿಸಲಾಗುತ್ತಿದೆ ಎಂದು ಹೇಳಿದ್ದಾರೆ.12-thousand-bus-action-passengers-dcm-laxman-savadi

Key words: 12 thousand- bus-  Action – passengers-DCM- Laxman Savadi.