Friday, August 14, 2026

BDA Apartments

Home Crime ಪೂಜೆ ಸಲ್ಲಿಸಿ ವಾಪಸ್ಸಾಗುವ ವೇಳೆ ಸಿಡಿಲ ಬಡಿತದಿಂದ ನಾಲ್ವರು ಅಸ್ವಸ್ಥ..

ಪೂಜೆ ಸಲ್ಲಿಸಿ ವಾಪಸ್ಸಾಗುವ ವೇಳೆ ಸಿಡಿಲ ಬಡಿತದಿಂದ ನಾಲ್ವರು ಅಸ್ವಸ್ಥ..

ಮೈಸೂರು,ಮೇ,25,2019(www.justkannada.in):  ಸಿಡಿಲ ಬಡಿತಕ್ಕೆ ನಾಲ್ವರು ಅಸ್ವಸ್ಥರಾಗಿರುವ ಘಟನೆ ಮೈಸೂರು ಜಿಲ್ಲೆ ಹೆಚ್.ಡಿ ಕೋಟೆಯಲ್ಲಿ ನಡೆದಿದೆ.

ಎಚ್.ಡಿ ಕೋಟೆ ತಾಲೂಕಿನ ಚಿಕ್ಕದೇವಮ್ಮನ ಬೆಟ್ಟದಲ್ಲಿ ಈ ಘಟನೆ ನಡೆದಿದೆ. ಪುಟ್ಟೀರಯ್ಯ (40), ಶಂಕರ (37), ಸ್ವಾಮಿ (36), ರಂಗಯ್ಯ (35) ಸಿಡಿಲಬಡಿತದಿಂದ ಗಾಯಾಗೊಂಡವರು. ಗಾಯಾಳುಗಳು ನಂಜನಗೂಡು ತಾಲೂಕಿನ ದೇಬೂರು ಗ್ರಾಮದವರಾಗಿದ್ದು ಎಚ್.ಡಿ.ಕೋಟೆ‌ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.

ಅಸ್ವಸ್ಥಗೊಂಡ ನಾಲ್ವರು ಚಿಕ್ಕದೇವಮ್ಮ ಬೆಟ್ಟಕ್ಕೆ ಆಗಮಿಸಿ ಪೂಜೆ‌ ಸಲ್ಲಿಸಿ ವಾಪಸ್ಸು ತೆರಳುವಾಗ ಈ ಘಟನೆ ನಡೆದಿದೆ. ಮಳೆ ಬರುತಿದ್ದಂತೆಯೇ ಮರದ ಕೆಳಗೆ ನಾಲ್ವರು ಆಶ್ರಯ ಪಡೆದಿದ್ದರು. ಈ ಸಂದರ್ಭದಲ್ಲಿ ಸಿಡಿಲು ಬಡಿದಿದೆ. ಸರಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Key words: Four people are injury in hd kote

#hdkote: #people #injury  #rain