ಲಂಚ ಸ್ವೀಕರಿಸುತ್ತಿದ್ದ ನಾಲ್ವರು ಇಂಜಿನಿಯರ್ಸ್ ಲೋಕಾಯುಕ್ತ ಬಲೆಗೆ.

ರಾಯಚೂರು,ನವೆಂಬರ್,10,2022(www.justkannada.in):  ರಾಯಚೂರಿನಲ್ಲಿ ಲಂಚಸ್ವೀಕರಿಸುತ್ತಿದ್ದ ನಾಲ್ವರು ಇಂಜಿನಿಯರ್ಸ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಹೈದರಾಬಾದ್ ರಸ್ತೆಯಲ್ಲಿರುವ ನೀರಾವರಿ ನಿಗಮದ ಕಚೇರಿಯಲ್ಲಿ  ನೀರಾವರಿ ಇಲಾಖೆ ನಾಲ್ವರು ಇಂಜಿನಿಯರ್ ಗಳು ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದಾರೆ.

ಬಿಲ್ ಕ್ಲಿಯರ್ ಮಾಡಲು 5 ರಿಂದ 10 ಸಾವಿರ ಲಂಚ ಸ್ವೀಕರಿಸುತ್ತಿದ್ದರು ಎನ್ನಲಾಗಿದೆ . ಬಳ್ಳಾರಿ ಮೂಲದ ಗುತ್ತಿಗೆದಾರ  ಈಶ್ವರಯ್ಯರಿಂದ ನಾಲ್ವರು ಇಂಜಿನಿಯರ್ ಗಳು ಲಂಚ ಸ್ವೀಕರಿಸುತ್ತಿದ್ದರು. ಈ ವೇಳೆ ಲೋಕಾಯುಕ್ತ ಅಧಿಕಾರಿಗಳಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. ನಾಲ್ವರು ಇಂಜಿನಿಯರ್ ಗಳನ್ನ ವಶಕ್ಕೆ ಪಡೆಯಲಾಗಿದೆ.

Key words: Four engineers – accepting- bribes – Lokayukta-trap.