Sunday, August 16, 2026

BDA Apartments

Home Front Page ನಾನು ಇರುವಾಗಲೇ ಏರ್ ಪೋರ್ಟ್ ನಿರ್ಮಾಣವಾಗಬೇಕು : ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ

ನಾನು ಇರುವಾಗಲೇ ಏರ್ ಪೋರ್ಟ್ ನಿರ್ಮಾಣವಾಗಬೇಕು : ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ

ಹಾಸನ,ಜನವರಿ,24,2021(www.justkannada.in) : ತುಮಕೂರು ವಿಮಾನ ನಿಲ್ದಾಣ ಕಾಮಗಾರಿ ನಡೆಯುತ್ತಿದ್ದು, ಶಿವಮೊಗ್ಗದಲ್ಲಿಯು ಕಾಮಗಾರಿ ಪ್ರಗತಿಯಲ್ಲಿದೆ. ಆದರೆ, ಹಾಸನದಲ್ಲಿ ಇನ್ನು ಆರಂಭವಾಗಿಲ್ಲ. ನಾನು ಇರುವಾಗಲೇ ಏರ್ ಪೋರ್ಟ್ ನಿರ್ಮಾಣವಾಗಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಸಿಎಂ ಬಿ.ಎಸ್.ವೈ ಅವರನ್ನು ಒತ್ತಾಯಿಸುವುದಾಗಿ ಹೇಳಿದರು.jk

ಸಿಎಂ ಬಿ.ಎಸ್.ವೈ ಅವರನ್ನು ಭೇಟಿಯಾಗುತ್ತೇನೆ. ಹಾಸನ ಜಿಲ್ಲೆಗೆ ಯಾವ ಶಾಶ್ವತ ಯೋಜನೆ ಕೊಟ್ಟಿದ್ದೀರಿ ಎಂಬುದರ ಬಗ್ಗೆ ಮಾಹಿತಿ ಕೇಳುತ್ತೇನೆ. Former Prime,Minister,H.D.Deve Gowda,Airport,should,built,I'm at it

ಹಾಸನ ವಿಮಾನ ನಿಲ್ದಾಣ ಅಭಿವೃದ್ಧಿಯು ನನ್ನ ಅವಧಿಯಲ್ಲಿ ಜಾರಿಯಾಗಿದ್ದು, ಇನ್ನೂ ಕೆಲಸ ಆರಂಭವಾಗಿಲ್ಲ. ನಮ್ಮ ಜಿಲ್ಲೆಯ ಕೆಲಸಗಳಿಗೂ ಆದ್ಯತೆ ನೀಡಿ ಎಂದು ಹೇಳುತ್ತೇನೆ ಎಂದಿದ್ದಾರೆ.

key words : Former Prime-Minister-H.D.Deve Gowda-Airport-should-built-I’m at it