Monday, August 10, 2026

BDA Apartments

Home Front Page ದೆಹಲಿ ಭೇಟಿ ರದ್ದುಗೊಳಿಸುವಂತೆ ಸಿಎಂ ಬಿಎಸ್ ಯಡಿಯೂರಪ್ಪಗೆ ಮಾಜಿ ಸಚಿವ ಹೆಚ್.ಕೆ ಪಾಟೀಲ್ ಪತ್ರ…

ದೆಹಲಿ ಭೇಟಿ ರದ್ದುಗೊಳಿಸುವಂತೆ ಸಿಎಂ ಬಿಎಸ್ ಯಡಿಯೂರಪ್ಪಗೆ ಮಾಜಿ ಸಚಿವ ಹೆಚ್.ಕೆ ಪಾಟೀಲ್ ಪತ್ರ…

ಬೆಂಗಳೂರು,ಆ,4,2019(www.justkannada.in):  ಕೃಷ್ಣ ಕೊಳ್ಳದ ಪ್ರದೇಶದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಯ ಕಡೆ ಗಮನ ನೀಡಿ ತಮ್ಮ ದೆಹಲಿ ಭೇಟಿಯನ್ನು ರದ್ದುಗೊಳಿಸಿ ಎಂದು  ಮಾಜಿ ಸಚಿವ ಹೆಚ್ ಕೆ ಪಾಟೀಲ್ ಅವರಿಂದ ಮುಖ್ಯ ಮಂತ್ರಿ ಬಿ ಎಸ್  ಯಡಿಯೂರಪ್ಪಗೆ ಪತ್ರ ಬರೆದು ಆಗ್ರಹಿಸಿದ್ದಾರೆ.

ಈ ಕುರಿತು  ಸಿಎಂ ಬಿಎಸ್ ವೈಗೆ ಪತ್ರ ಬರೆದಿರುವ ಹೆಚ್.ಕೆ ಪಾಟೀಲ್,  ಮಹಾರಾಷ್ಟ್ರ ರಾಜ್ಯದಿಂದ ಇಂದು 2.3 ಲಕ್ಷ ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಲಾಗಿದೆ. ಇದರಿಂದ ಕರ್ನಾಟಕ ರಾಜ್ಯದ ಗಡಿ ಭಾಗದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.  ಬೆಳಗಾವಿ ಜಿಲ್ಲೆಯ 37 ಗ್ರಾಮಗಳು ಪ್ರವಾಹ ಪರಿಸ್ಥಿತಿಯಿಂದ ತೀವ್ರ ಸಂಷ್ಟಕ್ಕೆ ಒಳಗಾಗಿವೆ.  ರಾಜ್ಯದಲ್ಲಿ ಸಂಕಷ್ಟ ಪರಿಸ್ಥಿತಿ ಇದ್ದರೂ ಆಡಳಿತಯಂತ್ರ ಸಮರೋಪಾದಿಯ ವಿಪತ್ತು ನಿರ್ವಹಣೆಗೆ ಸಿದ್ಧವಾಗಿಲ್ಲ ಎಂದು ಆರೋಪಿಸಿದ್ದಾರೆ.

ಹಾಗೆಯೇ ಪ್ರವಾಹ ಪರಿಸ್ಥಿತಿ ಎದುರಿಸಲು ಎನ್ ಡಿ ಆರ್ ಎಫ್ ಹಾಗೂ ದೋಣಿ ರಕ್ಷಣಾ ತಂಡಗಳನ್ನು ಸನ್ನದ್ಧವಾಗಿಡಬೇಕು. ದೆಹಲಿ ಪ್ರವಾಸವನ್ನು ರದ್ದು ಗೊಳಿಸಿ ಪ್ರವಾಹ ಪ್ರದೇಶಗಳತ್ತ ಗಮನ ನೀಡಿ ಎಂದು ಹೆಚ್.ಕೆ ಪಾಟೀಲ್ ಪತ್ರದಲ್ಲಿ ತಿಳಿಸಿದ್ದಾರೆ.  ಹಾಗೆಯೇ ಪ್ರಧಾನಿಗಳ ಭೇಟಿಗೂ ಒತ್ತಾಯಿಸುವಂತೆ ಆಗ್ರಹಿಸಿದ್ದಾರೆ.

Key words: Former minister HK Patil -writes – letter-CM BS Yeddyurappa