ಸಂಪುಟ ವಿಸ್ತರಣೆ ವೇಳೆ ಅಸಮರ್ಥರನ್ನ ಕೈಬಿಡಲಿ- ಮಾಜಿ ಸಚಿವ ಸಿ.ಟಿ ರವಿ ಒತ್ತಾಯ.

ಬೆಂಗಳೂರು,ಮಾರ್ಚ್,14,2022(www.justkannada.in):  ಸಚಿವ ಸಂಪುಟ ವಿಸ್ತರಣೆ ವೇಳೆ ಅಸಮರ್ಥರನ್ನ ಕೈಬಿಡಲಿ.  ಪಕ್ಷಕ್ಕೆ ಕೊಡುಗೆ ನೀಡದವರನ್ನ ಸಂಪುಟದಿಂದ ತೆಗೆದು ಹಾಕಲಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಒತ್ತಾಯಿಸಿದ್ದಾರೆ.

ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಚಿವ ಸಿಟಿ ರವಿ, ಪಕ್ಷಕ್ಕೆ ಕೊಡುಗೆ ನೀಡದವರನ್ನ  ತಮ್ಮ ಖಾತೆಗೂ ಪಕ್ಷಕ್ಕ ನ್ಯಾಯ ನೀಡದವರನ್ನ  ಸಂಪುಟದಿಂದ ಕೈ ಬಿಡಲಿ. ಪಕ್ಷಕ್ಕೆ ಹೊರೆ ಆದವರ ಬಗ್ಗೆ ಸಿಎಂ ಗಮನಿಸಲಿ ಎಂದು ಸಲಹೆ ನೀಡಿದರು.

ನಿಗಮಮಂಡಳಿ ನೇಮಕ ವಿಳಂಬ ಕುರಿತು ಪ್ರತಿಕ್ರಿಯಿಸಿದ ಸಿ.ಟಿ ರವಿ, ನಿಗಮ ಮಂಡಳಿ ನೇಮಕ ವಿಳಂಬಕ್ಕೆ ಹಲವು ಕಾರ್ಯಕರ್ತರಲ್ಲಿ ಅಸಮಾಧಾನ ಎದ್ದಿದೆ. ಹಲವರು ಪರಿಸ್ಥಿತಿ ಲಾಭ ಪಡೆದು ಖುಷಿ ಪಡ್ತಿದ್ದಾರೆ. ಈಗಾಗಲೇ  ನಿಗಮ ಮಂಡಳಿ ನೇಮಕ ಆಗಬೇಕಿತ್ತು ಆದರೆ ಈವರೆಗೂ ಯಾಕೆ ನೇಮಕ ಆಗಿಲ್ಲ ಗೊತ್ತಾಗುತ್ತಿಲ್ಲ ಎಂದರು.

Key words: Former Minister -CT Ravi -cabinet