ಐದು ದಿನದಿಂದ ಬೆಂಗಳೂರಿನಿಂದ ಸ್ವಂತ ಊರುಗಳಿಗೆ ಹೊರಟ ಕಾರ್ಮಿಕರ ಸಂಖ್ಯೆ ಬರೋಬ್ಬರಿ 1 ಲಕ್ಷ !

ಬೆಂಗಳೂರು, ಮೇ 06, 2020 (www.justkannada.in): ಕಳೆದ ಐದು ದಿನಗಳಿಂದ  ಬೆಂಗಳೂರು ಹಾಗೂ ರಾಜ್ಯದ ವಿವಿಧ ವಿಭಾಗಗಳಿಂದ ಅಂದಾಜು  1 ಲಕ್ಷ  ಕಾರ್ಮಿಕರನ್ನು ಸ್ಥಳಾಂತರಿಸಲಾಗಿದೆ. ಹಾಗೂ 3400 ಕ್ಕೂ ಹೆಚ್ಚು ಬಸ್ಸುಗಳನ್ನು ಕಾರ್ಯಚರಣೆ ಮಾಡಲಾಗಿದೆ.

ಇಂದು ಸಹ ಬೆಳಗ್ಗೆ 9 ರಿಂದ ಬಸ್ಸುಗಳ ಕಾರ್ಯಚರಣೆ ಎಂದು ತಿಳಿಸಿದ್ದಾಗ್ಯೂ , ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ  ಬೆಳಗ್ಗೆ 8 ಕ್ಕೆ ಬಸ್ಸುಗಳ ಕಾರ್ಯಚರಣೆ ಪ್ರಾರಂಭಿಸಲಾಗಿತ್ತು.

ಕಾರ್ಮಿಕರಿಗಾಗಿ ರಾಜ್ಯದ ವಿವಿಧ ಒಟ್ಟು72  ಸ್ಥಳಗಳಿಗೆ ಬಸ್ಸುಗಳ ಕಾರ್ಯಚರಣೆ ಮಾಡಲಾಗುತ್ತಿದೆ. ಬೆಳಗ್ಗೆ 8 ರಿಂದ ಇಲ್ಲಿಯವರೆಗೂ ಬೆಂಗಳೂರಿನಿಂದ 106 ಬಸ್ಸುಗಳನ್ನು ಕಾರ್ಯ ಚರಣೆ‌ ಮಾಡಲಾಗಿದೆ. ಕೆ ಎಸ್ ಆರ್ ಟಿ‌ ಸಿ ಸೇರಿ ಇತರೆ ಸಾರಿಗೆ ನಿಗಮಗಳ ಚಾಲಕ/ ನಿರ್ವಾಹಕರು ಹಾಗೂ ಸಿಬ್ಬಂದಿಗಳು ಈ‌ ನಿಟ್ಟಿನಲ್ಲಿ ಅವಿರತ ಕೆಲಸ ನಿರ್ವಹಿಸುತ್ತಿದ್ದಾರೆ .