Tuesday, August 11, 2026

BDA Apartments

Home Front Page ಮೆಟ್ರೋ ದರ ಏರಿಕೆಗೆ ತಾತ್ಕಾಲಿಕ ತಡೆ: ಸಂಸದ ತೇಜಸ್ವಿ ಸೂರ್ಯಗೆ ಸವಾಲು ಹಾಕಿ ಡಿಸಿಎಂ ಡಿಕೆಶಿ

ಮೆಟ್ರೋ ದರ ಏರಿಕೆಗೆ ತಾತ್ಕಾಲಿಕ ತಡೆ: ಸಂಸದ ತೇಜಸ್ವಿ ಸೂರ್ಯಗೆ ಸವಾಲು ಹಾಕಿ ಡಿಸಿಎಂ ಡಿಕೆಶಿ

ನವದೆಹಲಿ,ಫೆಬ್ರವರಿ,10,2026 (www.justkannada.in):  ಮೆಟ್ರೋ ದರ ಏರಿಕೆಗೆ ತಾತ್ಕಾಲಿಕ ತಡೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಂಸದ ತೇಜಸ್ವಿಸೂರ್ಯಗೆ ಡಿಸಿಎಂ ಡಿಕೆ ಶಿವಕುಮಾರ್ ಸವಾಲು ಹಾಕಿದ್ದಾರೆ.

ಈ ಕುರಿತು ನವದೆಹಲಿಯಲ್ಲಿ ಮಾತನಾಡಿರುವ ಡಿಸಿಎಂ ಡಿಕೆ ಶಿವಕುಮಾರ್,  ತೇಜಸ್ವಿ ಸೂರ್ಯ ಹೇಳಿಕೆಗೆ ಸೊಪ್ಪು ಹಾಕಲ್ಲ  ಬೆಂಗಳೂರಿಗೆ  ಅವರ ಕೊಡುಗೆ ಏನು? ಅವರು ಅನುದಾನ ತಂದಿದ್ದಾರಾ?  ಎಂದು ಪ್ರಶ್ನಿಸಿದರು.

ದರ ಇಳಿಸಿದ್ದೇವೆ ಎಂದು ಹೇಳಲು ಅವರಿಗೆ ಏನು ಅವಕಾಶವಿದೆ ಕೇಂದ್ರ ಸಚಿವರ ಜೊತೆ ಮಾತನಾಡಿದ ತಕ್ಷಣ ಆಗಿ ಬಿಡುತ್ತಾ? ಆದೇಶ ಕಾಪಿ ತೋರಿಸಲಿ ಎಂದು ತೇಜಸ್ವಿಸೂರ್ಯಗೆ ಡಿಸಿಎಂ ಡಿಕೆ ಶಿವಕುಮಾರ್ ಸವಾಲು ಹಾಕಿದರು. ಹಾಗೆಯೇ ದೊಡ್ಡ ಲೀಡರ್ ಆಗಲು ಸೂರ್ಯ ಹೀಗೆ ಹೇಳಿದ್ದಾರೆ. ಎಂದು ವಾಗ್ದಾಳಿ ನಡೆಸಿದರು.

Key words: metro, fare, hike, DCM DK Shivakumar, challenges, MP, Tejasvi Surya