Friday, August 14, 2026

BDA Apartments

Home Front Page ಏಕಾಏಕಿ ಕಾಲೇಜು ಸ್ಥಳಾಂತರಕ್ಕೆ ಆಕ್ರೋಶ: ಉನ್ನತ ಶಿಕ್ಷಣ ಸಚಿವರ ಮನೆ ಮುಂದೆ ಗ್ರಾಮಸ್ಥರಿಂದ ಪ್ರತಿಭಟನೆ…

ಏಕಾಏಕಿ ಕಾಲೇಜು ಸ್ಥಳಾಂತರಕ್ಕೆ ಆಕ್ರೋಶ: ಉನ್ನತ ಶಿಕ್ಷಣ ಸಚಿವರ ಮನೆ ಮುಂದೆ ಗ್ರಾಮಸ್ಥರಿಂದ ಪ್ರತಿಭಟನೆ…

ಮೈಸೂರು,ಜು,2,2019(www.justkannada.in): ಏಕಾಏಕಿ ಕಾಲೇಜನ್ನ ಬೇರೆಡೆಗೆ ಸ್ಥಳಾಂತರಿಸಿದ ರಾಜ್ಯ ಸರ್ಕಾರದ ನಿರ್ಧಾರವನ್ನ ವಿರೋಧಿಸಿ ಜೆ.ಜಿ.ಹಳ್ಳಿ ಗ್ರಾಮಸ್ಥರು ಉನ್ನತ ಶಿಕ್ಷಣ ಸಚಿವ ಜಿ.ಟಿ ದೇವೇಗೌಡರ ಮನೆ ಮುಂದೆ ಪ್ರತಿಭಟನೆ ನಡೆಸಿದರು.

ದೂರದ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಜನವನಗೊಂಡನಹಳ್ಳಿಯ ಪ್ರಥಮ ದರ್ಜೆ ಕಾಲೇಜಿನ ರಕ್ಷಣೆಗಾಗಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.  ತಾಲ್ಲೂಕಿನ ಜನವನಗೊಂಡನಹಳ್ಳಿಯ ಪ್ರಥಮ ದರ್ಜೆ ಕಾಲೇಜನ್ನು ಮಂಡ್ಯ ಜಿಲ್ಲೆಯ  ಮದ್ದೂರು ತಾಲ್ಲೂಕಿಗೆ  ರಾಜ್ಯ ಸರ್ಕಾರ ಸ್ಥಳಾಂತರ ಮಾಡಿದೆ. ಪ್ರಸ್ತುತ ಕಾಲೇಜು 55 ವಿದ್ಯಾರ್ಥಿಗಳನ್ನು ಹೊಂದಿದ್ದು, ಸರ್ಕಾರದ ಆದೇಶದಿಂದ ಜನವನಗೊಂಡನಹಳ್ಳಿಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಸ್ತುತ ಸಾಲಿನ ದಾಖಲಾತಿಯನ್ನು ನಿಲ್ಲಿಸಲಾಗಿದೆ.

ಇದರಿಂದಾಗಿ ತಾಲ್ಲೂಕಿನ ಸುತ್ತಮುತ್ತಲಿನ ಗ್ರಾಮದ ಹೆಣ್ಣು ಮಕ್ಕಳು ಶಿಕ್ಷಣಕ್ಕೆ ಕುತ್ತು  ಉಂಟಾಗಿದ್ದು ಸರ್ಕಾರದ ನಡೆಗೆ ಚಿತ್ರದುರ್ಗದ ಜೆ.ಜಿ.ಹಳ್ಳಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಲೇಜು ಸ್ಥಳಾಂತರ ಮಾಡದಂತೆ  ಸಚಿವರಿಗೆ ಮನವಿ ಮಾಡಿದ್ದಾರೆ.

Key words: Displacement- college –Outrage-chitradurga-mysore-minister-protest