ಹೊಸ ‘ಬೆಳ್ಳಿ ಕಾಲುಂಗುರ’ಕ್ಕೆ ಧನ್ಯಾ ರಾಮ್’ಕುಮಾರ್ ಹೀರೋಯಿನ್ !

ಬೆಂಗಳೂರು, ಆಗಸ್ಟ್ 12, 2022 (www.justkannada.in): ‘ಬೆಳ್ಳಿ ಕಾಲುಂಗುರ’. ಟೈಟಲ್‌ ಇಟ್ಕೊಂಡು ಮತ್ತೆ ಹೊಸ ಸಿನಿಮಾ ಸೆಟ್ಟೇರಲಿದೆ.

ಸಾರಾ ಗೋವಿಂದು ಅವರೇ ಹೊಸ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಬಹಳ ದಿನಗಳ ಬಳಿಕ ಮತ್ತೆ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.

ಹೊಸ ‘ಬೆಳ್ಳಿ ಕಾಲುಂಗುರ’ ಇಂದು ಸೆಟ್ಟೇರಿದೆ. ಅಂದಹಾಗೆ ಹೊಸ ‘ಬೆಳ್ಳಿಕಾಲುಂಗುರ’ ಕಥೆಯೇನು? ನಿರ್ದೇಶಕ ಹೆಚ್ ವಾಸು ಈ ಸೀಕ್ರೆಟ್ ಅನ್ನು ಶೀಘ‍್ರವೇ ರಿವೀಲ್ ಮಾಡಲಿದ್ದಾರೆ.

ದಿವಂಗತ ಕೆವಿ ರಾಜು ನಿರ್ದೇಶಿಸಿದ್ದ ‘ಬೆಳ್ಳಿ ಕಾಲುಂಗುರ’ ಸಿನಿಮಾ 1992ರಲ್ಲಿ ರಿಲೀಸ್ ಆಗಿತ್ತು. ಆಗ ತಾನೇ ಚಿತ್ರರಂಗಕ್ಕೆ ಕಾಲಿಟ್ಟಿದ್ದ ಮಾಲಾಶ್ರೀಗೆ ಕನಸಿನ ರಾಣಿ ಅನ್ನೋ ಪಟ್ಟ ಸಿಗುವುದಕ್ಕೆ ಈ ಸಿನಿಮಾ ಅಡಿಪಾಯ ಹಾಕಿತ್ತು.

ಸಾರಾ ಗೋವಿಂದು ನಿರ್ಮಿಸುತ್ತಿರುವ ಹೊಸ ‘ಬೆಳ್ಳಿ ಕಾಲುಂಗುರ’ ಸಿನಿಮಾವನ್ನು ಹೆಚ್. ವಾಸು ನಿರ್ದೇಶನ ಮಾಡುತ್ತಿದ್ದಾರೆ.

ಇದು ತ್ರಿಕೋನ ಪ್ರೇಮಕಥೆ. ಒಬ್ಬ ಹೀರೊ, ಇಬ್ಬರು ಹೀರೋಯಿನ್ ಇದ್ದು, ಧನ್ಯ ರಾಮ್‌ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ.