ಎಸ್ ಪಿ ಬಿ ನಿಧನದಿಂದ ಸಾಂಸ್ಕೃತಿಕ ಜಗತ್ತು ಬಡವಾಗಿದೆ : ಪ್ರಧಾನಿ ನರೇಂದ್ರ ಮೋದಿ ಸಂತಾಪ

ಬೆಂಗಳೂರು,ಸೆಪ್ಟೆಂಬರ್,25,2020(www.justkannada.in) : ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಮಣ್ಯಂ ಅವರ ನಿಧನದಿಂದ ನಮ್ಮ ಸಾಂಸ್ಕೃತಿಕ ಜಗತ್ತು ಬಡವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.jk-logo-justkannada-logoಬಾಲಸುಬ್ರಮಣ್ಯಂ ಅವರು ಎಲ್ಲರ ಮನೆಮಾತಾಗಿದ್ದರು. ಅವರು ಹಾಡುಗಳು ಜನರನ್ನು ಮೋಡಿ ಮಾಡಿತ್ತು. ಕೆಲ ದಶಕಗಳ ಅವರ ಹಾಡುಗಳು ಎಲ್ಲರನ್ನೂ ರಂಜಿಸಿತು. ಅವರು ವಿಧಿವಶರಾಗಿರುವುದು ದುಃಖದ ಸಂಗತಿ. ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಾರ್ಥಿಸಿದ್ದಾರೆ.

key words : cultural-world-poorer-death-SPB-Prime Minister Narendra Modi-condolences