ನಿಗಮ ಮಂಡಳಿ ನೇಮಕ: ನನಗೆ ಯಾವುದೇ ಅಸಮಾಧಾನವಿಲ್ಲ- ಶಾಸಕ ಎಸ್.ಆರ್ ಶ್ರೀನಿವಾಸ್.

ತುಮಕೂರು,ಜನವರಿ,27,2024(www.justkannada.in): ನಿನ್ನೆಯಷ್ಟೆ ಕೆಪಿಸಿಸಿ 32 ಶಾಸಕರಿಗೆ ನಿಗಮಮಂಡಳಿ ಅಧ್ಯಕ್ಷ ಸ್ಥಾನ ನೀಡಿ ಆದೇಶಿಸಿದ್ದು ಕೆಎಸ್ ಆರ್ ಟಿಸಿ ನಿಗಮದ ಅಧ್ಯಕ್ಷರಾಗಿ ತಮ್ಮನ್ನು ನೇಮಕ ಮಾಡಿರುವ ಕುರಿತು  ಶಾಸಕ ಎಸ್.ಆರ್ ಶ್ರೀನಿವಾಸ್ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿರುವ ಶಾಸಕ ಎಸ್.ಆರ್ ಶ್ರೀನಿವಾಸ್, ಸಿಎಂ, ಡಿಸಿಎಂ ನಂಬಿಕೆ ಇಟ್ಟು ನನ್ನ ನೇಮಕ  ಮಾಡಿದ್ದಾರೆ. ನನಗೆ ಯಾವುದೇ ಅಸಮಾಧಾನವಿಲ್ಲ ನಾನು ಯಾವುದೇ ಸ್ಥಾನಮಾನ ಕೇಳಿರಲಿಲ್ಲ.  ಇದರಲ್ಲಿ ಅಸಮಾಧಾನ ಪ್ರಶ್ನೆಯೇ ಉದ್ಭವಿಸಲ್ಲ.  ಯಾವುದು ಕೊಟ್ಟಿದ್ದಾರೆ ಎಂದು ನಾನು ಚಿಂತಿಸುವುದಿಲ್ಲ ಎಂದು ತಿಳಿಸಿದ್ದಾರೆ.

Key words: Corporation Board-appointment – no displeasure- MLA -SR Srinivas