ಕಾಂಗ್ರೆಸ್ ಅಭ್ಯರ್ಥಿಗಳಾದ ಅನಿಲ್ ಚಿಕ್ಕಮಾದು, ಹೆಚ್.ಸಿ ಮಹದೇವಪ್ಪಗೆ ಗೆಲುವು.

ಮೈಸೂರು,ಮೇ,13,2023(www.justkannada.in):  ರಾಜ್ಯ ವಿಧಾನಸಭಾ ಫಲಿತಾಂಶ ಪ್ರಕಟವಾಗುತ್ತಿದ್ದು ಬಹುತೇಕ ಕಾಂಗ್ರೆಸ್ ಬಹುಮತ ಪಡೆದು ಅಧಿಕಾರಕ್ಕೆ ಬರುವ ಸಾಧ್ಯತೆ ಹೆಚ್ಚಾಗಿದೆ. ಈ ನಡುವೆ ಮೈಸೂರಿನ ಹೆಚ್.ಡಿ ಕೋಟೆ ಮತ್ತು ಟಿ. ನರಸೀಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ಎಚ್‌ಡಿ.ಕೋಟೆ ಯಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಅಭ್ಯರ್ಥಿ ಅನಿಲ್‌ ಚಿಕ್ಕಮಾದು‌ ಗೆಲುವು ಸಾಧಿಸಿದ್ದಾರೆ. ಈ ಬಗ್ಗೆ ಅಧಿಕೃತ ಘೋಷಣೆಯೊಂದೆ ಬಾಕಿ ಇದೆ. ಹೆಚ್.ಡಿ ಕೋಟೆ 13ನೇ ಸುತ್ತಿನಲ್ಲಿ ಕಾಂಗ್ರೆಸ್ನ  ಅನಿಲ್ ಚಿಕ್ಕಮಾದು 54823 ಮತಗಳು, ಬಿಜೆಪಿಯ  ಕೃಷ್ಣನಾಯಕ 31428 ಮತಗಳು ಮತ್ತು ಜೆಡಿಎಸ್  ನ ಜಯಪ್ರಕಾಶ್  ಗೆ 28283ಮತಗಳು ಲಭಿಸಿವೆ. ಈ ಮೂಲಕ ಕಾಂಗ್ರೆಸ್ 23395 ಮತಗಳ ಮುನ್ನಡೆ ಸಾಧಿಸಿದೆ.

ತಿ.ನರಸೀಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ  ಡಾ.ಎಚ್‌.ಸಿ.ಮಹದೇವಪ್ಪ ಅವರು  ಜೆಡಿಎಸ್ ಅಭ್ಯರ್ಥಿ ಅಶ್ವಿನ್ ಕುಮಾರ್ ವಿರುದ್ಧ ಗೆಲುವು ಸಾಧಿಸಿದ್ದಾರೆ. ಕೇವಲ ಇನ್ನ ಒಂದು ಸುತ್ತಿನ ಮತ ಎಣಿಕೆ ಮಾತ್ರ ಬಾಕಿ ಇದೆ.

ನಂಜನಗೂಡು 4ನೇ ಸುತ್ತು ಮತ ಎಣಿಕೆಯಲ್ಲಿ ಕಾಂಗ್ರೆಸ್ ದರ್ಶನ್ ಧ್ರುವನಾರಾಯಣ್ – 24595, ಬಿಜೆಪಿ ಹರ್ಷವರ್ಧನ್ – 13659 ಮತಗಳಿಸಿದ್ದು ಕಾಂಗ್ರೆಸ್ 10936 ಮತಗಳಿಂದ ಮುನ್ನಡೆ ಸಾಧಿಸಿದೆ.

Key words: Congress -candidates -Anil Chikkamadu -HC Mahadevappa -won.