ಕಾಂಗ್ರೆಸ್ ಬಸ್ ಕನ್ಯಾಕುಮಾರಿಯಿಂದ ಹೊರಟು ಕಾಶ್ಮೀರದಲ್ಲಿ ನಿಂತೋಗಿದೆ-ಮಾಜಿ ಸಚಿವ ಹೆಚ್.ಡಿ ರೇವಣ್ಣ ಲೇವಡಿ

ಹಾಸನ,ಫೆಬ್ರವರಿ,2,2023(www.justkannada.in): ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆ ಬಗ್ಗೆ ಟೀಕಿಸಿರುವ ಮಾಜಿ ಸಚಿವ ಹೆಚ್.ಡಿ ರೇವಣ್ಣ, ಕಾಂಗ್ರೆಸ್ ಬಸ್ ಕನ್ಯಾಕುಮಾರಿಯಿಂದ ಹೊರಟು ಕಾಶ್ಮೀರದಲ್ಲಿ ನಿಂತೋಗಿದೆ ಎಂದು ಲೇವಡಿ ಮಾಡಿದ್ದಾರೆ.

 ಇಂದು ಮಾಧ್ಯಮಗಳ ಜೊತೆ ಮಾತಾಡಿದ ಹೆಚ್.ಡಿ ರೇವಣ್ಣ,  ಕಾಂಗ್ರೆಸ್ ಪಕ್ಷ ನಿರ್ನಾಮಗೊಂಡಿರುವ ಪಕ್ಷ. ಕಾಂಗ್ರೆಸ್ ನಾಯಕರು ಜೆಡಿಎಸ್ ಪಕ್ಷವನ್ನು ಎ ಟೀಮ್ ಬಿ ಟೀಮ್ ಅಂತ ಕರೆಯುತ್ತಾರೆ. ಆದರೆ ಕಳೆದ ಲೋಕಸಭೆ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಿಂದ ಹೆಚ್ ಡಿ ದೇವೇಗೌಡರು  ಸೋಲೋದಕ್ಕೆ ಕಾಂಗ್ರೆಸ್ ಕಾರಣ ಎಂದು ಆರೋಪಿಸಿದರು.

ಹಾಸನದಲ್ಲಿ ಮುಸ್ಲಿಂ ಮತದಾರರು ವೋಟ್ ನೀಡದೆ ಹೋಗಿದ್ದಕ್ಕೆ ಬಿಜೆಪಿ ಅಭ್ಯರ್ಥಿ ವಿಧಾನ ಸಭೆಗೆ ಆಯ್ಕೆಯಾದರು. ಕಾಂಗ್ರೆಸ್ ಎಂಥ ಪಕ್ಷ ಅಂತ ಜನರಿಗೆ ಗೊತ್ತಾಗಿದೆ ಎಂದು ಕಿಡಿಕಾರಿದರು.

Key words: Congress- bus – halts – Kashmir – former Minister-HD Revanna