ಗ್ಯಾರಂಟಿ ಯೋಜನೆ ಬಗ್ಗೆ ನಾಲ್ಕು ಇಲಾಖೆಗಳ ಜೊತೆ ಸಿಎಂ ಸಿದ್ಧರಾಮಯ್ಯ ಪ್ರಗತಿ ಪರಿಶೀಲನಾ ಸಭೆ.

ಬೆಂಗಳೂರು,ನವೆಂಬರ್,22,2023(www.justkannada.in): ಗ್ಯಾರಂಟಿ  ಯೋಜನೆಗಳು ಸರಿಯಾಗಿ ಅನುಷ್ಟಾನವಾಗಿಲ್ಲ ಎಂಬ ಆರೋಪ ಬೆನ್ನಲ್ಲೆ ಇದೀಗ ಸಿಎಂ ಸಿದ್ದರಾಮಯ್ಯ ನಾಲ್ಕು ಇಲಾಖೆಗಳ ಜೊತೆ ಪ್ರಗತಿ ಪರಿಶೀಲನಾ ಸಭೆ ನಡೆಸುತ್ತಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಶಕ್ತಿ ಯೋಜನೆ ಬಗ್ಗೆ ಸಾರಿಗೆ ಇಲಾಖೆ, ಅನ್ನಭಾಗ್ಯ ಯೋಜನೆ ಬಗ್ಗೆ ಆಹಾರ ಇಲಾಖೆ , ಗೃಹಜ್ಯೋತಿ ಯೋಜನೆ ಬಗ್ಗೆ ಇಂಧನ ಇಲಾಖೆ,  ಗೃಹಲಕ್ಷ್ಮಿ ಯೋಜನೆ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜೊತೆ ಸಿಎಂ ಸಿದ್ದರಾಮಯ್ಯ ಪ್ರಗತಿ ಪರಿಶೀಲನಾ ಸಭೆ ನಡೆಸುತ್ತಿದ್ದಾರೆ.

ಸಭೆಯಲ್ಲಿ ನಾಲ್ವರು ಸಚಿವರು ಅಧಿಕಾರಿಗಳ  ಉಪಸ್ಥಿತರಿದ್ದಾರೆ. ನಾಲ್ಕು ಗ್ಯಾರಂಟಿ ಯೋಜನೆ ಜಾರಿ ಸಂಬಂಧ ಸಿಎಂ ಪ್ರತ್ಯೇಕ ಸಭೆ ನಡೆಸುತ್ತಿದ್ದು, ಮೊದಲಿಗೆ ಶಕ್ತಿ ಯೋಜನೆ ಬಗ್ಗೆ ಸಾರಿಗೆ ಇಲಾಖೆ ಜೊತೆ ಸಭೆ ನಡೆಸಿದರು.

Key words: CM Siddaramaiah- progress –review- meeting -four departments -guarantee scheme.