Saturday, August 15, 2026

BDA Apartments

Home Front Page ಬಾಲಕಾರ್ಮಿಕ ಪದ್ದತಿ  ಹೋಗಲಾಡಿಸಲು ಸಿಎಂ ಸಿದ್ಧರಾಮಯ್ಯ ಕರೆ.

ಬಾಲಕಾರ್ಮಿಕ ಪದ್ದತಿ  ಹೋಗಲಾಡಿಸಲು ಸಿಎಂ ಸಿದ್ಧರಾಮಯ್ಯ ಕರೆ.

ಬೆಂಗಳೂರು,ಜೂನ್,12,2023(www.justkannada.in): ಬಾಲಕಾರ್ಮಿಕ ಪದ್ದತಿಯನ್ನು  ಹೋಗಲಾಡಿಸಲು ಮುಖ್ಯಮಂತ್ರಿ ಸಿದ್ಧರಾಮಯ್ಯ ಕರೆ ನೀಡಿದರು.

ಬೆಂಗಳೂರಿನ ಎಂ.ಜಿ ರಸ್ತೆ ಬಳಿಯ ಗಾಂಧಿ ಪ್ರತಿಮೆ ಬಳಿ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ ಜಾಥಾಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು. ಜಾಥಾಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಯಾರಾದ್ರೂ ಬಾಲ ಕಾರ್ಮಿಕರು ಕಂಡರೆ ಕೆಲಸದಿಂದ ಬಿಡಿಸಿ. ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಜಾತಿ ವ್ಯವಸ್ಥೆ ಪದ್ಧತಿಯಿಂದಾಗಿ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಗುಲಾಮಗಿರಿ ಮನಸ್ಥಿತಿಯಿಂದ ಹೊರ ಬರಬೇಕು ಎಂದರು.

ರೈಟು ಎಜುಕೇಶನ್ ಆ್ಯಕ್ಟ್  ಮಾಡಲಾಗಿದೆ ಎಸ್ ಆರ್ ಬೊಮ್ಮಾಯಿ ಕಾಲದಲ್ಲಿ ಕಾನೂನು ಜಾರಿಯಾಗಿತ್ತು.   ಸರಿಯಾದ ಶಿಕ್ಷಣ ಇಲ್ಲದಿದ್ದರೇ ಜ್ಞಾನ ಬರಲ್ಲ ಬಾಲಕಾರ್ಮಿಕ ಪದ್ದತಿ  ಹೋಗಲಾಡಿಸಬೇಕು ಎಂದು ಸಿಎಂ ಸಿದ್ಧರಾಮಯ್ಯ ತಿಳಿಸಿದರು.

Key words: CM- Siddaramaiah- calls – eliminate- child labour