Saturday, August 22, 2026

BDA Apartments

Home Front Page ಉಪಚುನಾವಣೆಯಲ್ಲಿ ನೂರಕ್ಕೆ ನೂರು ಎರಡೂ ಕ್ಷೇತ್ರದಲ್ಲಿ ಗೆಲ್ತೇವೆ- ಸಿಎಂ ಸಿದ್ದರಾಮಯ್ಯ

ಉಪಚುನಾವಣೆಯಲ್ಲಿ ನೂರಕ್ಕೆ ನೂರು ಎರಡೂ ಕ್ಷೇತ್ರದಲ್ಲಿ ಗೆಲ್ತೇವೆ- ಸಿಎಂ ಸಿದ್ದರಾಮಯ್ಯ

ದಾವಣಗೆರೆ,ಏಪ್ರಿಲ್,6,2026 (www,justkannada.in): ಉಪಚುನಾವಣೆಯಲ್ಲಿ ನೂರಕ್ಕೆ ನೂರು ಎರಡೂ ಕ್ಷೇತ್ರದಲ್ಲಿ ಗೆಲ್ಲುತ್ತೇವೆ ಎಂದು  ಸಿಎಂ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಇಂದು ಮಾಧ್ಯಗಳ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಮ್ಮ ಗ್ಯಾರಂಟಿ ಯೋಜನೆಗಳಿಂದ ಜನರು ಸಂತೋಷಗೊಂಡಿದ್ದಾರೆ. ಬಿಜೆಪಿಯವರಿಗೆ ಚುನಾವಣೆಯಲ್ಲಿ ಹೇಳಲು ಬೇರೆ ವಿಷಯಗಳಿಲ್ಲ ಬಿಜೆಪಿಯು ಧರ್ಮ ಜಾತಿ ಹೆಸರಲ್ಲಿ ಸಮಾಜ ಒಡೆಯುವ ಪಕ್ಷ. ಬಿಜೆಪಿ ಯಾವ ಆಧಾರದ ಮೇಲೆ ಮತ ಕೇಳುತ್ತಾರೆ ಎಂದು ಪ್ರಶ್ನಿಸಿದರು.

ವಿ.ಸೋಮಣ್ಣ ಕೇಂದ್ರದ ರಾಜ್ಯ ಖಾತೆ ಹೊಂದಿರುವ ಸಚಿವರು.  ನನಗಿರುವ ಮಾಹಿತಿ ಪ್ರಕಾರ ಸೋಮಣ್ಣ ಬಳಿ ಫೈಲ್ ಗಳೇ ಬರಲ್ಲ ಎಂದು ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದರು.

ಕುಟುಂಬ ರಾಜಕಾರಣ ಕುರಿತು ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಅಪ್ಪ ಮಕ್ಕಳು ಮೊಮ್ಮಕಳು ಜನ ಬಯಸಿದ್ರೆ ರಾಜಕಾರಣ ಮಾಡಲಿ ಎಂದರು.  ದಾವಣಗೆರೆಯಲ್ಲಿ ಸಚಿವ ಜಮೀರ್  ಪ್ರಚಾರ ವಿಚಾರ ಜಮೀರ್ ಪ್ರಚಾರಕ್ಕೆ ಸಮಯವಿಲ್ಲ. ಈಗ ಬಾಗಲಕೋಟೆಗೆ ಹೋಗಿದ್ದಾರೆ. ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿ 42 ಸಾವಿರ ಮುಸ್ಲೀಂ ಮತಗಳಿವೆ ಎಂದರು.

Key words: We, will, win, 100%,  by-elections, CM Siddaramaiah