Tuesday, September 15, 2026

BDA Apartments

Home Front Page 2ನೇ ದಿನವೂ ಮುಂದುವರೆದ ಸಿಟಿ ರೌಂಡ್ಸ್: ಜನರ ಸಮಸ್ಯೆ ಆಲಿಸಿದ  ಮಾಜಿ ಸಿಎಂ ಹೆಚ್.ಡಿಕೆ.

2ನೇ ದಿನವೂ ಮುಂದುವರೆದ ಸಿಟಿ ರೌಂಡ್ಸ್: ಜನರ ಸಮಸ್ಯೆ ಆಲಿಸಿದ  ಮಾಜಿ ಸಿಎಂ ಹೆಚ್.ಡಿಕೆ.

ಬೆಂಗಳೂರು,ಮೇ,21,2022(www.justkannada.in):  ಬೆಂಗಳೂರಿನ ಮಳೆಹಾನಿ ಪ್ರದೇಶಗಳಿಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು ಈ ನಡುವೆ 2ನೇ ದಿನವೂ ಸಿಟಿ ರೌಂಡ್ಸ್ ಮುಂದುವರೆದಿದೆ.

ನಿನ್ನೆ ಬೆಂಗಳೂರಿನ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದ್ದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಇಂದು ಸಹ ನಗರದ ಬ್ಯಾಟರಾಯನಪುರ, ಹೆಬ್ಬಾಳ ಯಲಹಂಕಗೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿದರು. ಈ ವೇಳೆ ಹೆಚ್.ಡಿ ಕುಮಾರಸ್ವಾಮಿ ಮುಂದೆ ತಮ್ಮ ಅಳಲು ತೋಡಿಕೊಂಡ ಜನರು, ಮಳೆ ಮಂದಾಗ ಚರಂಡಿ ನೀರು ಮನೆಯೊಳಗೆ ಬರುತ್ತೆ. ಆದರೂ ಸಮಸ್ಯೆ ಕೇಳೋರಿಲ್ಲ. ಜನರಿಗೆ ತಾತ್ಕಾಲಿಕವಾಗಿ ಸರ್ಕಾರ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.2ನೇ ದಿನವೂ ಮುಂದುವರೆದ ಸಿಟಿ ರೌಂಡ್ಸ್ HDK

ಜನರ ಸಮಸ್ಯೆ ಆಲಿಸಿದ ಹೆಚ್.ಡಿಕೆ, ಬೆಂಗಳೂರಿನಲ್ಲಿ 7 ಜನ ಮಂತ್ರಿಗಳಿದ್ದರೂ ಯಾವುದೇ ಪ್ರಯೋಜನವಿಲ್ಲ ಎಂದು ಕಿಡಿಕಾರಿದರು. ಕಳೆದ ಮೂರು ಎರಡು ದಿನಗಳಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಸಹ ಬೆಂಗಳೂರು ಮಳೆಪೀಡತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದರು.

Key words: City Rounds- Former CM –HD Kumaraswamy-people.