Sunday, August 9, 2026

BDA Apartments

Home Cinema ‘ಆದ್ಯಾ’ ಕಥೆ ಹೇಳಲು ಥಿಯೇಟರ್’ಗೆ ಬರ್ತಿದ್ದಾರೆ ಚಿರಂಜೀವಿ ಸರ್ಜಾ, ಶ್ರುತಿ ಹರಿಹರನ್, ಸಂಗೀತ ಭಟ್

‘ಆದ್ಯಾ’ ಕಥೆ ಹೇಳಲು ಥಿಯೇಟರ್’ಗೆ ಬರ್ತಿದ್ದಾರೆ ಚಿರಂಜೀವಿ ಸರ್ಜಾ, ಶ್ರುತಿ ಹರಿಹರನ್, ಸಂಗೀತ ಭಟ್

ಬೆಂಗಳೂರು, ಫೆಬ್ರವರಿ 20, 2020 (www.justkannada.in): ಟಿ.ಜಿ.ವಿಶ್ವಪ್ರಸಾದ್ ಹಾಗೂ ರಘುನಾಥ್ ಎಸ್ ಅವರು ನಿರ್ಮಿಸಿರುವ ಆದ್ಯಾ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಚೈತನ್ಯ ಕರಿಹಳ್ಳಿ.ಎಂ ನಿರ್ದೇಶನದ ಈ ಚಿತ್ರಕ್ಕೆ ಶ್ರೀಧರ್ ವಿ ಸಂಭ್ರಮ್ ಸಂಗೀತ ನೀಡಿದ್ದಾರೆ. ಮಲ್ಹಾರಭಟ್ ಜೋಶಿ ಛಾಯಾಗ್ರಹಣ ಹಾಗೂ ಅಕ್ಷಯ್ ಪಿ ರಾವ್ ಅವರ ಸಂಕಲನವಿರುವ ಈ ಚಿತ್ರಕ್ಕೆ ರೋಹಿತ್ ಪದಕಿ ಸಂಭಾಷಣೆ ಬರೆದಿದ್ದಾರೆ.

ಚಿರಂಜೀವಿ ಸರ್ಜಾ ನಾಯಕಾರಾಗಿ ನಟಿಸಿರುವ ಈ ಚಿತ್ರದ ತಾರಾಬಳಗದಲ್ಲಿ ಸಂಗೀತಾ ಭಟ್, ಶ್ರುತಿ ಹರಿಹರನ್, ಶಶಾಂಕ್ ಪುರುಷೋತ್ತಮ್, ರವಿಶಂಕರ್ ಗೌಡ, ಪ್ರಮೋದ್ ಶೆಟ್ಟಿ, ಗಿರಿರಾಜ್, ಚೈತ್ರಾ ರಾವ್, ಹರೀಶ್ ಶೇಷಾದ್ರಿ ಮುಂತಾದವರಿದ್ದಾರೆ.