Saturday, August 22, 2026

BDA Apartments

Home Front Page ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಆಷಾಢ ಪೂಜೆ ಇಲ್ಲ: ದಸರಾ ವಿಚಾರ ಕುರಿತು ಸಚಿವ ಎಸ್.ಟಿ ಸೋಮಶೇಖರ್  ಹೇಳಿದ್ದೇನು...

ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಆಷಾಢ ಪೂಜೆ ಇಲ್ಲ: ದಸರಾ ವಿಚಾರ ಕುರಿತು ಸಚಿವ ಎಸ್.ಟಿ ಸೋಮಶೇಖರ್  ಹೇಳಿದ್ದೇನು ಗೊತ್ತೆ..?

ಮೈಸೂರು,ಜೂ,16,2020(www.justkannada.in):  ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಆಷಾಢ ವಿಶೇಷ ಪೂಜೆ ನಡೆಸದಿರಲು ಆಡಳಿತ ಮಂಡಳಿ ನಿರ್ಧಾರ ಮಾಡಿದೆ. ಆಷಾಢ ವಿಶೇಷ ಪೂಜೆ ಬೇಡವೆಂದು ಆಡಳಿತ ಮಂಡಳಿ ಅಭಿಪ್ರಾಯ ವ್ಯಕ್ತಪಡಿಸಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದ್ದಾರೆ.Chamundi hills Mysore- minister- ST Somashekar-Anandh singh

ಸಚಿವರಾದ ಎಸ್.ಟಿ ಸೋಮಶೇಖರ್ ಮತ್ತು ಆನಂದ್ ಸಿಂಗ್ ಚಾಮುಂಡಿ ಬೆಟ್ಟಕ್ಕೆ  ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, ಆಷಾಢದ ಪ್ರತಿ ಶುಕ್ರವಾರ ಲಕ್ಷಾಂತರ ಜನ ಬೆಟ್ಟಕ್ಕೆ ಬರುತ್ತಾರೆ. ಈಗ ಪರಿಸ್ಥಿತಿ ಸಂಪೂರ್ಣ ಸುಧಾರಿಸಿಲ್ಲ. ಈಗಾಗಿ ಆಷಾಢ ಪೂಜೆ‌ ಬೇಡ ಎಂಬ ತೀರ್ಮಾನಕ್ಕೆ ಬರುತ್ತಿದ್ದೇವೆ ಎಂದು ತಿಳಿಸಿದರು.

ಇನ್ನು ದಸರಾ ವಿಚಾರದಲ್ಲಿ ಇನ್ನು ಯಾವ ಚರ್ಚೆಯು ನಾವು ಆರಂಭಿಸಿಲ್ಲ. ಪರಿಸ್ಥಿತಿಗೆ ಅನುಗುಣವಾಗಿ ಅದರ ಚರ್ಚೆಗಳು ಶುರುವಾಗುತ್ತವೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.

Key words: Chamundi hills Mysore- minister- ST Somashekar-Anandh singh