Saturday, August 8, 2026

BDA Apartments

Home Front Page ಚಲುವರಾಯಸ್ವಾಮಿ ಊಟಕ್ಕೆ ಹೋಗಿದ್ದು ತಪ್ಪಲ್ಲ: ಕೈ ಮುಖಂಡರ ವಿರುದ್ದ ಕ್ರಮದ ಪ್ರಶ್ನೆ ಇಲ್ಲ ಎಂದ್ರು ಸಚಿವ...

ಚಲುವರಾಯಸ್ವಾಮಿ ಊಟಕ್ಕೆ ಹೋಗಿದ್ದು ತಪ್ಪಲ್ಲ: ಕೈ ಮುಖಂಡರ ವಿರುದ್ದ ಕ್ರಮದ ಪ್ರಶ್ನೆ ಇಲ್ಲ ಎಂದ್ರು ಸಚಿವ ಜಮೀರ್ ಅಹ್ಮದ್ ಖಾನ್…

ಬೆಂಗಳೂರು,ಮೇ,3,2019(www.justkannada.in): ಮಂಡ್ಯ ಲೋಕಸಭಾ ಕ್ಷೇತ್ರದ  ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಏರ್ಪಡಿಸಿದ್ದ ಔತಣಕೂಟಕ್ಕೆ ಚಲುವರಾಯಸ್ವಾಮಿ ಹೋಗಿದ್ದು ತಪ್ಪಿಲ್ಲ. ಹೀಗಾಗಿ ಮಂಡ್ಯ ಕಾಂಗ್ರೆಸ್ ಮುಖಂಡರ ವಿರುದ್ದ ಕ್ರಮ ಕೈಗೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಸ್ಪಷ್ಟಪಡಿಸಿದರು.

ಡಿನ್ನರ್ ಪಾರ್ಟಿ ವಿಚಾರ ಕುರಿತು ವಿಚಾರಣೆಗಾಗಿ ಬೆಂಗಳೂರಿನ ಕೆಪಿಸಿಸಿ ಕಚೇರಿಗೆ ಬರುವಂತೆ ಮಾಜಿ ಶಾಸಕ ಚಲುವರಾಯಸ್ವಾಮಿ ಹಾಗೂ ನರೇಂದ್ರಸ್ವಾಮಿ ಅವರಿಗೆ ಬುಲಾವ್ ನೀಡಲಾಗಿತ್ತು. ಈ ಹಿನ್ನೆಲೆ ಇಬ್ಬರು ನಾಯಕರು ತೆರಳಿದ್ದರು. ಈ ವೇಳೆ ಇಬ್ಬರು ಮುಖಂಡರನ್ನ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಿಚಾರಣೆ ನಡೆಸಿದರು. ಈ ವೇಳೆ ಸಚಿವ ಜಮೀರ್ ಅಹ್ಮದ್ ಖಾನ್ ಕೂಡ ಉಪಸ್ಥಿತರಿದ್ದರು.

ವಿಚಾರಣೆ  ಬಳಿಕ ಮಾಧ್ಯಮದ ಜತೆ ಮಾತನಾಢಿದ ಸಚಿವ ಜಮೀರ್ ಅಹ್ಮದ್ ಖಾನ್, ಚಲುವರಾಯಸ್ವಾಮಿ ಡಿನ್ನರ್ ಪಾರ್ಟಿಗೆ ಹೋಗಿದ್ದು ತಪ್ಪಾ…? ಸುಮಲತಾ ಅವರು ನನ್ನನ್ನು ಕರೆದಿದ್ದರೂ ನಾನು ಡಿನ್ನರ್ ಗೆ ಹೋಗುತ್ತಿದೆ.  ಹೀಗೆ ಊಟಕ್ಕೆ ಸುಮಲತಾ ಕರೆದಿದ್ದಾರೆ ಎಂದು ಕುಮಾರಸ್ವಾಮಿ ಕೋಪ ಯಾಕೆ ಮಾಡಿಕೊಂಡರೋ ನನಗೆ ಗೊತ್ತಿಲ್ಲ ಎಂದರು.

ನಿಖಿಲ್ 2 ಲಕ್ಷಮತಗಳ ಅಂತರದಲ್ಲಿ ಗೆಲುವು…

ಇನ್ನು ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ಚಲುವರಾಯಸ್ವಾಮಿ ಮತ್ತು  ಮಂಡ್ಯ  ಇತರೇ ಕಾಂಗ್ರೆಸ್ ಮುಖಂಡರ ಜತೆ ಮಾತನಾಡಬೇಕಿತ್ತು. ಆದರೂ ಸರಿ ನಿಖಿಲ್ ಕುಮಾರಸ್ವಾಮಿ ಮಂಡ್ಯದಲ್ಲಿ 2 ಲಕ್ಷ ಮತಗಳ ಅಂತರದಲ್ಲಿ ಗೆಲ್ಲುತ್ತಾರೆ ಎಂದು ಜಮೀರ್ ಅಹ್ಮದ್ ಖಾನ್ ವಿಶ್ವಾಸ ವ್ಯಕ್ತಪಡಿಸಿದರು.

Key words:  Chaluvarasaswamy -not wrong – lunch-Minister- Zamir Ahmed Khan