ಸಿಬಿಐ ದಾಳಿಯಾಗಿದ್ದಕ್ಕೆ ಪದೇ ಪದೇ ಬಿಜೆಪಿ ಮೇಲೆ ಟೀಕೆ: ಡಿಕೆಶಿ ಆರೋಪ ಸರಿಯಲ್ಲ- ಸಚಿವ ಆರ್.ಅಶೋಕ್.

ಬೆಳಗಾವಿ,ಡಿಸೆಂಬರ್,20,2022(www.justkannada.in):  ನಿನ್ನೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲೆ ಸಿಬಿಐ ದಾಳಿಯಾಗಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಿಂದ ತನಿಖಾ ಸಂಸ್ಥೆಗಳ ದುರ್ಬಳಕೆ ಎಂದು ಆರೋಪಕ್ಕೆ ಕಂದಾಯ ಸಚಿವ ಆರ್.ಅಶೋಕ್ ತಿರುಗೇಟು ನೀಡಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿದ ಸಚಿವ ಆರ್.ಅಶೋಕ್, ಬಿಜೆಪಿ ಮೇಲೆ ಸುಮ್ಮನೆ ಆರೋಪ ಮಾಡಲಾಗುತ್ತಿದೆ.  ಡಿ.ಕೆ ಶಿವಕುಮಾರ್ ಆರೋಪದಲ್ಲಿ ಯಾವುದೇ ಹುರುಳಿಲ್ಲ.  ಈ ಹಿಂದೆ ಜನಾರ್ಧನ ರೆಡ್ಡಿ ಮೇಲೆ ದಾಳಿಯಾಗಿತ್ತು ಆಗ ಯಾರ ಪ್ರೇರಣೆಯಿಂದ ಸಿಬಿಐ ದಾಳಿಯಾಗಿತ್ತು..? ಎಂದು ಪ್ರಶ್ನಿಸಿದರು.kpcc-president-dk-shivakumar-function-minister-r-ashok

ಸಿಬಿಐ ದಾಳಿಯಾಗಿದ್ದಕ್ಕೆ  ಪದೇ ಪದೇ ಬಿಜೆಪಿ ಮೇಲೆ ಟೀಕೆ ಮಾಡುತ್ತಿದ್ದಾರೆ.  ಸಿಬಿಐ ಸ್ವತಂತ್ರ ಸಂಸ್ಥೆ ಡಿಕೆ ಶಿವಕುಮಾರ್  ಆರೋಪ ಸರಿಯಲ್ಲ ಎಂದು ಕಿಡಿಕಾರಿದರು.

Key words: CBI-attack- – DK Shivakumar-  Minister -R. Ashok.