ಜಾತಿ ಜನಗಣತಿ ವರದಿ ರಾಜಕೀಯ ಪ್ರೇರಿತ- ಮಾಜಿ ಸಚಿವ ಅಶ್ವಥ್ ನಾರಾಯಣ್.

ಬೆಂಗಳೂರು,ನವೆಂಬರ್,22,2023(www.justkannada.in): ಜಾತಿ ಜನಗಣತಿ ವರದಿ ರಾಜಕೀಯ ಪ್ರೇರಿತವಾಗಿದ್ದು ಅದಕ್ಕೆ ನಮ್ಮ ವಿರೋಧವಿದೆ ಎಂದು ಮಾಜಿ ಸಚಿವ ಅಶ್ವತ್ ನಾರಾಯಣ್ ತಿಳಿಸಿದ್ದಾರೆ.

ಈ ಕುರಿತು ಇಂದು ಮಾತನಾಡಿದ ಅಶ್ವಥ್ ನಾರಾಯಣ್, ಜಾತಿಜನಗಣತಿ ವರದಿ ಅವೈಜ್ಷಾನಿಕವಾಗಿದೆ ಜಾತಿ ಜನಗಣತಿಗೆ ನಮ್ಮ ವಿರೋಧವಿದೆ. ಸಿದ್ದರಾಮಯ್ಯ ಸ್ವಾರ್ಥ ರಾಜಕಾರಣ ಮಾಡುತ್ತಿದ್ದಾರೆ.  ಹಿಂದುಳಿದ ವರ್ಗಗಳಿಗೆ ಒಳ್ಳೆ ಕೆಲಸ ಮಾಡುತ್ತಿಲ್ಲ. ಕೇವಲ ಚುನಾವಣೆಯಲ್ಲಿ ಗೆಲ್ಲೋಕೆ ಮಾತ್ರ ಜಾತಿಜನಗಣತಿ ವರದಿ ಬಳಸುತ್ತಿದ್ದಾರೆ ಎಂದು ಅಶ್ವತ್ ನಾರಾಯಣ್ ತಿಳಿಸಿದರು.

Key words: Caste census –report- politically- motivated- former minister- Aswath Narayan.