ಕರ್ತವ್ಯದಲ್ಲಿದ್ದ ಸಿ.ಆರ್.ಪಿ.ಎಫ್. ಯೋಧ ಹೃದಯಾಘಾತದಿಂದ ಸಾವು

ಹಾಸನ,ಜೂ,13,2020(www.justkannada.in):  ಕರ್ತವ್ಯದಲ್ಲಿದ್ದ ಹಾಸನ ಮೂಲದ ಸಿ.ಆರ್.ಪಿ.ಎಫ್. ಯೋಧ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.

ಹಾಸನ ತಾಲ್ಲೂಕಿನ ಈಚಲಹಳ್ಳಿ ಗ್ರಾಮದ ಯೋಧ ಹೇಮಂತ್ ಕುಮಾರ್ (42) ಮೃತಪಟ್ಟವರು. ಛತ್ತಿಸಗಡ್ ದ ಸುಕ್ಮಾದಲ್ಲಿ ಕರ್ತವ್ಯದಲ್ಲಿದ್ದಾಗ ಹೇಮಂತ್ ಕುಮಾರ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಯೋಧ ಹೇಮಂತ್ ಕುಮಾರ್ ಕಳೆದ 19 ವರ್ಷಗಳಿಂದ ಸಿಆರ್ಪಿಎಫ್ ನಲ್ಲಿ ಸೇವೆಸಲ್ಲಿಸುತ್ತಿದ್ದರು.  ಸಿ.ಆರ್.ಪಿ.ಎಫ್. 150 ನೇ ಬಟಾಲಿಯನ್ ನಲ್ಲಿ ಸೇವೆ ಸಲ್ಲಿಸುತ್ತಿದ್ದರು.C.R.P.F- soldier-duty- Death - heart attack

ಎರಡು ತಿಂಗಳು ಸೇವೆ ಸಲ್ಲಿಸಿ ನಿವೃತ್ತಿ ಪಡೆದು ಬರುವುದಾಗಿ ಹೇಮಂತ್ ಕುಟುಂಬಸ್ಥರಿಗೆ ತಿಳಿಸಿದ್ದರು. ಆದರೆ ಇದೀಗ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಕುಟುಂಬಸ್ಥರಲ್ಲಿ ಶೋಕ ಮಡುಗಟ್ಟಿದೆ.

Key words: C.R.P.F- soldier-duty- Death – heart attack