Saturday, August 8, 2026

BDA Apartments

Home Front Page ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ದರ ಏರಿಕೆ ಹೊರೆ ಜನರ ಮೇಲೆ ಹಾಕಿಲ್ಲ- ಬಿವೈ ವಿಜಯೇಂದ್ರ

ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ದರ ಏರಿಕೆ ಹೊರೆ ಜನರ ಮೇಲೆ ಹಾಕಿಲ್ಲ- ಬಿವೈ ವಿಜಯೇಂದ್ರ

ಹಾಸನ,ಏಪ್ರಿಲ್,9,2025 (www.justkannada.in):  ಇತ್ತೀಚೆಗೆ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್  ಮೇಲೆ ಅಬಕಾರಿ ಸುಂಕವನ್ನು 2ರೂಪಾಯಿ ಹೆಚ್ಚಳ ಮಾಡಿದ್ದು, ಇದಕ್ಕೆ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ವಿರುದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.

ಹಾಸನದಲ್ಲಿ ಇಂದು ಮಾತನಾಡಿದ ಬಿವೈ ವಿಜಯೇಂದ್ರ, ಡಿಸೇಲ್ ಪೆಟ್ರೋಲ್ ಬೆಲೆ ಏರಿಕೆಗೆ ಕಾರಣವಿದೆ. ಅಂತರಾಷ್ಟ್ರೀಯ ಕಚ್ಚಾತೈಲ ಬೆಲೆ ಏರಿಕೆಯಾಗಿದೆ. ಹೀಗಾಗಿ ಅಬಕಾರಿ ಸುಂಕ ಹೆಚ್ಚಿಸಲಾಗಿದೆ. ಆದರೆ  ಕೇಂದ್ರ ಸರ್ಕಾರ ದರ ಏರಿಕೆಯ ಹೊರೆಯ  ಜನರ ಮೇಲೆ ಹಾಕಿಲ್ಲ. ತೈಲಕಂಪನಿಗಳು  ಹೊರೆಯನ್ನ ಬರಿಸಲಿವೆ  ಕೇಂದ್ರ ಸರ್ಕಾರ 300 ರೂ ಕಡಿತಗೊಳಿಸಿ 50 ರೂ ಏರಿಕೆ ಮಾಡಿದೆ ಎಂದರು.

ರಾಜ್ಯದಲ್ಲಿ ಹಾಲಿನ ದರ, ಡೀಸೆಲ್ ದರ ಏರಿಕೆ ಮಾಡಿದ ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿ ಜನಾಕ್ರೋಶ ಯಾತ್ರೆ ನಡೆಸುತ್ತಿದ್ದು ಇದೇ ವೇಳೆ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್  ಮೇಲೆ ಅಬಕಾರಿ ಸುಂಕ ಹೆಚ್ಚಳ ಮಾಡಿದ್ದಕ್ಕೆ ಕಾಂಗ್ರೆಸ್ ನಾಯಕರು ಟೀಕಿಸಿದ್ದರು.

Key words: Central government, petrol, diesel, price, hike, BY Vijayendra