ಬಿಡದಿ ಟೌನ್ ಶಿಪ್ ವಿಚಾರ: ಬಹಿರಂಗ ಚರ್ಚೆಗೆ ಬರುವಂತೆ ಸಿಎಂ ಡಿಕೆಶಿಗೆ HDK ಸವಾಲು

ಬೆಂಗಳೂರು,ಜೂನ್,22,2026 (www.justkannada.in): ಬಿಡದಿ ಟೌನ್ ಶಿಪ್ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ  ಬಹಿಂರಂಗ ಚರ್ಚೆಗೆ ಬರುವಂತೆ  ಸಿಎಂ ಡಿಕೆ ಶಿವಕುಮಾರ್ ಗೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ,   ಬೈರಮಂಗಲಕ್ಕೆ ಬನ್ನಿ ಚರ್ಚೆ ಮಾಡೋಣ. ರೈತರು ಭೂಮಿ ಕೊಡಲು ಒಪ್ಪಿದ್ದಾರಾ?  ಅಲ್ಲಿಯೇ ಕೇಳೋಣ ಎಂದರು.

ರಾಝ್ಯದ ಸಂಪುಟ ವಿಸ್ತರಣೆಗೆ ಮುಂದಾಗಿದ್ದಾರೆ.  ಲೂಟಿ ಮಾಡಿ ಚುನಾವಣೆ ಮಾಡಿದ್ದು ಆಯಿತು ಈಗ ದೇಶದ ಚುನಾವಣೆ ನಡೆಸಲು ಹೊರಟಿದ್ದಾರೆ.  ಸಚಿವ ಸಂಫುಟಕ್ಕೆ ಸೇರುವುದಕ್ಕೆ  ಖೋಟಾ ಮಾಡಿದ್ದಾರಂತೆ.  ಗೌರ್ನಮೆಂಟ್,  ಮೆರಿಟ್ ಖೋಟಾ ಅಂತಾ ಮಾಡಿದ್ದಾರಂತೆ ಎಂದು ಹೆಚ್ ಡಿಕೆ ಲೇವಡಿ ಮಾಡಿದರು.

Key words: Bidadi, town ship, HDK, DK Shivakumar